Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ದ -ಬಸವರಾಜ ಬೊಮ್ಮಯಿ.

ಸುದ್ದಿಮೂಲ ರವಿ ಹೊಸಮನಿ

ಕೊಪ್ಪಳ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ) ಕಲಬುರಗಿ ಕೊಪ್ಪಳ ಜಿಲ್ಲೆ ವತಿಯಿಂದ .ದಿನಾಂಕ 24 -8 -2021 ರಂದು ಮಂಗಳವಾರ ಸ್ಥಳ – ಫಾನಘಂಟಿ ಕಲ್ಯಾಣ ಮಂಟಪ ಭಾಗ್ಯನಗರ ರೋಡ್ ಕೊಪ್ಪಳದಲ್ಲಿ ಜರುಗಿದ ಒಂದು ದಿವಸದ ಕಾರ್ಯಗಾರ ನಡೆಯಿತು. ದೇಶದಲ್ಲಿರುವ ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶಾತಿ ಪರಿಕ್ಷೆಗಳ ಮಾಹಿತಿ ಕಾಯಾ೯ಗಾರದಲ್ಲಿ ಬೆಳಗಿನ ಅವಧಿಯಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು . ಬೆಳಗಿನ ಅವಧಿಗೆ (10 ರಿಂದ 2 ಗಂಟೆ ವರೆಗೆ) ಮಧ್ಯಾಹ್ನದ 2 ನೇ ಅವಧಿಯನ್ನು ಸರಕಾರಿ ಮತ್ತು ಖಾಸಗಿ ಪದವಿ ಪೂವ೯ ಮತ್ತು ಪದವಿ ಕಾಲೇಜುಗಳ ವಿಜ್ಞಾನ ವಿಷಯದ ಬಗ್ಗೆ ಉಪನ್ಯಾಸಕರಿಗೆ ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು .ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಿವರಾಮಗೌಡ ಮಾಜಿ ಸಂಸದರು ಹಾಗೂ ನಿರ್ದೇಶಕರು ಈ ಕಾರ್ಯಗಾರದ ಉದ್ಘಾಟನೆ ಮಾಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿ ಎಮ್ ಭೂಸನೂರಮಠ ನಿರ್ದೇಶಕರು ವಹಿಸಿದರು. ಪ್ರಾಸ್ತಾವಿಕ ನುಡಿಯನ್ನು ಶ್ರೀ ಪ್ರಭುರಾಜ ಕಲಬುರಗಿ ನಿರ್ದೇಶಕರು ಸಂಘದ ಕಾರ್ಯ ಚಟುವಟಿಕೆ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಪಾನಘಂಟಿ ವಕೀಲರು. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಮುಖರಾದ ಡಾ.ಗಣಪತಿ ಸಿನ್ನೂರು.ಡಾ.ಲಾಯಕ ಅಲಿ.ಡಾ.ಎನ್ ಸಂದೀಪ್. ಡಾ.ಅಪ್ಪಗೇರ ಸೋಮಶೇಖರ. ಡಾ.ಎಸ್ ಜಯವೇಲ್.ಡಾ.ಪರಶುರಾಮ ಎಮ್ ಕಾಂಬಳೆ. ಇವರುಗಳು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲ್ಲೂಕ ಸಂಯೋಜಕರು ಹಾಗೂ ಎಲ್ಲಾ ತಾಲೂಕಿನ ಉಪನ್ಯಾಸಕರಗಳು ಭಾಗವಹಿಸಿದರು.

.

 

 

Related posts

ಬಹುದಿನಗಳ ಬೇಡಿಕೆ ಈಡೇರಿದ ಹರ್ಷ • ರೈತರು–ಸಾರ್ವಜನಿಕರಿಗೆ ವಿದ್ಯುತ್ ಸರಬರಾಜು ಬಲವರ್ಧನೆ

satyadarshana

ಕರೋನಾ ದೂರಿಕರಿಸಲು ವ್ಯಾಕ್ಸಿನ್ ಹಾಕಿಸಿಕೊಳ್ಳಿ – ಪಾಪಣ್ಣ

satyadarshana

ಬರ ಮುನ್ಸೂಚನೆ; ಯಲಬುರ್ಗಾ, ಕುಕನೂರು ತಾಲ್ಲೂಕಿನಲ್ಲಿ ಕ್ರೀಯಾಯೋಜನೆ ರೂಪಿಸಲು ಶಾಸಕರ ಸೂಚನೆ

satyadarshana