Satya Darshana
ಬಿಸಿ ಬಿಸಿ ಸುದ್ದಿ
Other

ಮರ ಕಡಿಯಲು ₹30 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಡಿಆರ್‌ಎಫ್‌ಒ!

ರಾಮನಗರ: ತೇಗದ ಮರಗಳನ್ನು ಕಡಿದು ಸಾಗಿಸಲು ಅನುಮತಿ ನೀಡಲು ₹30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ರಾಮನಗರ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಜಶೇಖರಯ್ಯ ಎಂಬಾತನನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ರಾತ್ರಿ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

​ನಗರದ ಕೊತ್ತಿಪುರದ ಸಂತೋಷ್ ಎಂಬುವರು ತಮ್ಮ ಜಮೀನಿನಲ್ಲಿದ್ದ ತೇಗದ ಮರಗಳನ್ನು ಕಡಿಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅನುಮತಿ ನೀಡಲು ಆರಂಭದಲ್ಲಿ ₹40 ಸಾವಿರ ಬೇಡಿಕೆಯಿಟ್ಟಿದ್ದ ರಾಜಶೇಖರಯ್ಯ, ಅಂತಿಮವಾಗಿ ₹30 ಸಾವಿರಕ್ಕೆ ಡೀಲ್ ಕುದಿಸಿದ್ದ. ಕಚೇರಿಗೆ ಅಲೆದು ಬೇಸತ್ತ ಸಂತೋಷ್ ಅವರು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

​ಹೋಟೆಲ್‌ನಲ್ಲಿ ಲಂಚ ಪಡೆಯುವಾಗ ಟ್ರ್ಯಾಪ್:

ದೂರಿನನ್ವಯ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು, ಎಸ್‌ಪಿ ಕಚೇರಿ ವೃತ್ತದ ಹೋಟೆಲ್‌ನಲ್ಲಿ ದೂರುದಾರರಿಂದ ₹30 ಸಾವಿರ ನಗದು ಪಡೆಯುತ್ತಿದ್ದಾಗ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಅಧೀಕ್ಷಕಿ ಸ್ನೇಹ ಪಿ.ವಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿಗಳಾದ ಶಿವಪ್ರಸಾದ್, ರಾಜೇಶ್, ಇನ್‌ಸ್ಪೆಕ್ಟರ್‌ಗಳಾದ ಸಂದೀಪ್ ಕುಮಾರ್ ಬಿ.ಎನ್, ವಿಜಯಕುಮಾರ್ ಹಾಗೂ ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

​ಹಿಂದೆಯೂ ಕೇಳಿಬಂದಿತ್ತು ಸಾಲು ಸಾಲು ಲಂಚದ ಆರೋಪ!

ಬಂಧಿತ ಡಿಆರ್‌ಎಫ್‌ಒ ರಾಜಶೇಖರಯ್ಯ ವಿರುದ್ಧ ಈ ಹಿಂದೆಯೂ ತೀವ್ರ ಅಕ್ರಮ ಮತ್ತು ಲಂಚಾವತಾರದ ಆರೋಪಗಳು ಕೇಳಿಬಂದಿದ್ದವು:

​ಗಣಿಗಾರಿಕೆಗೆ ಅನುಕೂಲ: ಕಳೆದ ವರ್ಷ ತಾಲೂಕಿನ ಗ್ರಾಮವೊಂದರಲ್ಲಿ ಕಲ್ಲು ಗಣಿಗಾರಿಕೆಗಾಗಿ 900ಕ್ಕೂ ಹೆಚ್ಚು ಮರಗಳನ್ನು ಕಡಿದಾಗ, ಲಂಚ ಪಡೆದು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದ ಆರೋಪವಿತ್ತು.

​ದೌರ್ಜನ್ಯ ಮತ್ತು ಹಲ್ಲೆ: ಬಿಡದಿ ಚೆಕ್‌ಪೋಸ್ಟ್ ಬಳಿ ಸೌದೆ ವಾಹನ ಚಾಲಕನಿಗೆ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.

​ಇಲಾಖೆ ಸಿಬ್ಬಂದಿಗೂ ಕಿರುಕುಳ: ಲಂಚದ ವಿಚಾರ ತಿಳಿದಿದ್ದ ಇಲಾಖೆಯ ಗಸ್ತು ಸಿಬ್ಬಂದಿಯೊಬ್ಬರ ಮೇಲೆ ದೌರ್ಜನ್ಯ ಎಸಗಿದ ಕಾರಣಕ್ಕೆ ದಲಿತ ಸಂಘಟನೆಗಳು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದವು.

Related posts

ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ :ಋತುರಾಜ್‌ ಗಾಯಕ್ವಾಡ್‌  ಇಶಾನ್‌ ಶೈನ್‌, ಹರ್ಷಲ್‌ ಬೌಲಿಂಗ್‌ ಕಮಾಲ್‌.

satyadarshana

ವಿಧಾನಪರಿಷತ್ ಚುನಾವಣೆಗೆ ಕಣಕ್ಕಿಳಿಸಲು ಆಗ್ರಹ

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ. ಸೋಮವಾರ.04.2023

satyadarshana

Leave a Comment