ಕೊಪ್ಪಳ: ಕೊಪ್ಪಳ ಸಿವಿಲ್ ಇಂಜಿನಿಯರ್ಸ ಮತ್ತು ಆರ್ಕಿಟೆಕ್ಟ್ ಅಸೋಸಿಯೇಷನ್ ವತಿಯಿಂದ ನಗರದ ಪಾರ್ಥ ಹೋಟೆಲ್ ನಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ ಡೇ ಯನ್ನು ಆಚರಿಸಲಾಯಿತು .
ಅಧ್ಯಕ್ಷತೆಯನ್ನು ಪ್ರಮೋದ್ ಮುದಕವಿ ಅವರು ವಹಿಸಿದ್ದರು . ಸಂಘದ ಕಾರ್ಯದರ್ಶಿಗಳಾದ ಶ್ರೀ ಗವಿಸಿದ್ದೇಶ್ವರ ಹಿರೇಮಠ ರವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ್ ಅಭಿಯಂತರರು ಶ್ರೀ ಹೇಮಂತ್ ರಾಜ್ ಅವರು ಅಭಿಯಂತರುಗಳಿಗೆ ತಮ್ಮ ವೃತ್ತಿ ಜೀವನದ ರಂಗಕ್ಕೆ ಹಾಗೂ ಸಮಾನ ವೃತ್ತಿಪರರಿಗೆ ಹೇಗೆ ಬೆಲೆ ನೀಡಬೇಕೆಂದು ತಿಳಿಸಿದರು ತಮ್ಮ ಅನುಭವವನ್ನು ಹಂಚಿಕೊಂಡರು, ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರಸನ್ನ ಗಡದ್ ಅಧ್ಯಕ್ಷರು ನಗರ ಅಭಿವೃದ್ಧಿ ಪ್ರಾಧಿಕಾರ ಇವರು ಸಂಘಕ್ಕೆ ಯಾವುದೇ ನೆರವು ಬೇಕಾದಲ್ಲಿ ಸ್ಪಂದಿಸುವುದಾಗಿ ತಿಳಿಸಿದರು ಕಾರ್ಯಕ್ರಮದಲ್ಲಿ ಡಾ. ಬಿ ವಿ ಮುದಗಲ್, ಎನ್ ಆರ್ ಕುಕನೂರ್ ಶ್ರೀ ಸುರೇಶ್ ಬಬಲಾದ , ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಸಂಘದ ಎಲ್ಲಾ ಸದಸ್ಯರುಗಳು ಎಲ್ಲಾ ಇಲಾಖೆಯ ಅಭಿಯಂತರಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೋಳಿಸಿದರು.
