ಒಳಮೀಸಲಾತಿ ವರ್ಗೀಕರಣದ ರೋಸ್ಟರ್ ಬಿಂದು ರದ್ದುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ _ ಕೊಲಂಬೋ.
ಹರಪನಹಳ್ಳಿ : ಕರ್ನಾಟಕ ರಾಜ್ಯ ಸರ್ಕಾರದ ಎಸ್ ಸಿ ಅವೈಜ್ಞಾನಿಕ ಒಳಮೀಸಲಾತಿ ಹಂಚಿಕೆ ಯಿಂದ ಬಂಜಾರ, ಕೊರಚ, ಕೊರಮ ಹಾಗೂ ಭೋವಿ ಸಮುದಾಯಗಳಿಗೆ ಆಗಿರುವ ರೋಸ್ಟರ್ ಬಿಂದು, ರದ್ದು ಗೊಳಿಸಬೇಕೇಂದು ಅನ್ಯಾಯವನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಯ ಕಿರಣ್ ಎಲ್ ಬಿಕಿಮಟ್ಟಿ ತಾಂಡ ಇವರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು, ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಪ್ರಗತಿ ಪರ ಹೋರಾಟಗಾರರು, ನಗರದ ಹರಿಹರ ರಸ್ತೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರವಾಸಿ ಮಂದಿರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಕೊಲಂಬೋ ಸಮುದಾಯಗಳ ಪ್ರಮುಖರು ಒಳ ಮೀಸಲಾತಿ ಖಂಡಿಸಿ ಅನ್ಯಾಯವನ್ನು ಸರಿಪಡಿಸಿ, ಹಳೆ ಮೀಸಲಾತಿಯನ್ನೇ ಯತವತ್ತಾಗಿ ಜಾರಿಯಲ್ಲಿರಬೇಕು–ಒಳಮೀಸಲಾತಿ ಬೇಡ, ರೋಸ್ಟರ್ ಬಿಂದು ರದ್ದುಗೊಳಿಸಬೇಕು, ಬಂಜಾರ್ ಭೋವಿ ಕೋರಚ ಕೊರಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.
ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ವರ್ಗೀಕರಣವು ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾಗಿದೆ. ಈ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದಿಂದ ಶೈಕ್ಷಣಿಕ, ಉದ್ಯೋಗದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಪಡೆಯಲು ರೋಸ್ಟರ್ ಬಿಂದು ಅಳವಡಿಸುವುದರಿಂದ ಮುಂಬಡ್ತಿ ಪಡೆಯಲು ವಂಚಿತರಾಗಿರುವ ನಮಗೆ ಅವೈಜ್ಞಾನಿಕ ಒಳಮೀಸಲಾತಿ ಮುಂದಿನ ಯುವ ಪೀಳಿಗೆಯ ನಮ್ಮ ಹಕ್ಕುಗಳಿಗೆ ಧಕ್ಕೇಯನುಂಟು ಮಾಡಿರುವುದರಿಂದ ಹರಪನಹಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ವಿವಿಧ ತಾಂಡ,ಊರು ಗಳಿಂದ ಸ್ವಯಂ ಪ್ರೇರಿತರಾಗಿ ಬಂದು ಪ್ರತಿಭಟನೆ ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರು ಮಾತನಾಡಿ “ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ ಎಂದು ಆರೋಪಿಸಿದರು.ಕೊಲಂಬೋ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗದ ಹಕ್ಕು ಸರ್ವ ನಾಶವಾಗಿದೆ, ನಮ್ಮ ಸಮಾಜದ ಮಕ್ಕಳಿಗೆ ವಸತಿ ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಅವಕಾಶ ಇಲ್ಲದಂತಾಗಿದೆ, ಮೆಡಿಕಲ್, ಇಂಜಿನಿಯರಿಂಗ್ ಸೀಟ್ ಸಿಗುತ್ತಿಲ್ಲ, ಇನ್ನೂ ಸರ್ಕಾರಿ ನೌಕರಿ ದೂರದ ಮಾತು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೆ ತಂದ ಸರ್ಕಾರ ‘ಎ,‘ಬಿ,’ ಮತ್ತು ‘ಸಿ’ ಎಂದು ಗುಂಪುಗಳನ್ನು ರಚಿಸಿದೆ.‘ಸಿ ಗುಂಪಿನಲ್ಲಿ ಒಟ್ಟು 63 ಸಮುದಾಯಗಳಿಲ್ಲಿ ಬಂಜಾರ, ಕೊರಮ, ಕೊರಚ ಹಾಗೂ ಭೋವಿ ಸಮುದಾಯಗಳಿಗೆ ಶೇಕಡ.80 ರಷ್ಟು ಮತ್ತು 59 ಅಲೆಮಾರಿ ಸಮುದಾಯಗಳಿಗೆ ಶೇಕಡಾ 20 ರಷ್ಟು ಪಾಲು ನಿಗದಿಪಡಿಸಲಾಗಿದೆ” ಎಂದು ಹೇಳಿದರು.
ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ರೋಸ್ಟರ್ ವ್ಯವಸ್ಥೆಯಲ್ಲಿ 59 ಅಲೆಮಾರಿ ಸಮುದಾಯಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇದರಿಂದ ‘ಸಿ’ ಗುಂಪಿನಲ್ಲಿ ಶೇಕಡಾ 80 ರಷ್ಟು ಪಾಲು ಹೊಂದಿರುವ ಬಂಜಾರ, ಕೊರಮ, ಕೊರಚ ಹಾಗೂ ಭೋವಿ ಸಮುದಾಯಗಳಿಗೆ ಶೈಕ್ಷಣಿಕ, ಆರ್ಥಿಕ, ಸಮಾಜಿಕ ವಾಗಿ ಅನ್ಯಾಯವಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1 : 00 ವರೆಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಪ್ರತಿಭಟನಾಕಾರರು ತಮ್ಮ ತಾಳ್ಮೆ ಕಳೆದುಕೊಂಡಿದ್ದರು. ಅಂದರೆ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಲು ಸಂಬಂದ ಪಟ್ಟ ಅಧಿಕಾರಿಗಳು ಬದರೆ ಇದ್ದುದಕ್ಕೆ ಪ್ರತಿಭಟನಾಕಾರರು ನಮ್ಮ ಹೋರಾಟ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಪ್ರತಿಭನೆ ರಂಗೇರಿ ತೊಡಗಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು 10 ನಿಮಿಷ ಗಳ ಕಾಲಾವಧಿ ಸಮಯಕ್ಕೆ ಬಾರದೆ ಇದ್ದರೆ, ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕೊಟ್ಟರು, ತಕ್ಷಣ ತಾಲೂಕು ಅಡಳಿತ ಕಚೇರಿ ಯಿಂದ ತಹಶೀಲ್ದಾರ ಗಿರೀಶ್ ಬಾಬು ರವರು ಸ್ಥಳಕ್ಕೆ ದಾವಿಸಿ ಪ್ರತಿಭಟನಕಾರರ ಮನವಿಯನ್ನು ಸ್ವೀಕರಿಸಿದರು. 
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಪರವಾಗಿ ಎಸ್. ಪಿ. ಲಿಂಬ್ಯಾ ನಾಯ್ಕ, ಮಂಜ್ಯಾ ನಾಯ್ಕ ಬಂಜಾರ ಸಮಾಜದ ಶ್ರೀಗಳಾದ ಶಿವಪ್ರಕಾಶ್ ಮಹಾರಾಜ. ಬಂಜಾರ್ ಸಮಾಜದ ಮುಖಂಡರಾದ ರಘುರಾಮ್ ನಾಯ್ಕ, ಅಗ್ರಹಾರ ಅಶೋಕ, , ವಿದ್ಯಾರ್ಥಿ ಸಂಘಟನೆಯ ಯುವಕ ಕಿರಣ್ ,ಸಂಜು ಮೋಹನ್ , ಡಿಳ್ಯನಾಯ್ಕ, ಗೋಪಿನಾಯ್ಕ, ಗೋರ್ ಸೇನಾ ಜಿಲ್ಲಾಧ್ಯಕ್ಷ ರಾಜೀವ್ ಡಿ ನಾಯ್ಕ, ಬಂಡ್ರಿ ರವಿನಾಯ್ಕ, ಶಿರಗಾನಹಳ್ಳಿ ವಿಶ್ವನಾಥ್, ವಿರ್ಯಾನಾಯ್ಕ, ಕೋಟ್ರೇಶ್ ನಾಯ್ಕ, ಗಂಗಾನಾಯ್ಕ, ಹರೀಶ್ ನಾಯ್ಕ ಭೋವಿ ಗುರುಸಿದ್ದಪ್ಪ, ಕೆಂಚಪ್ಪ, ಸಂತೋಷ್ ಸತೀಶ್, ಹಾಲೇಶ್ ನಾಯ್ಕ, ಏಕಲವ್ಯ, ಮೆಗ್ಯ ನಾಯ್ಕ ಹಾಗೂ ಪಂಪಾ ನಾಯ್ಕ ಹೋನ್ನಪ್ಪ, ಕೊರಮ ಸಮಾಜದ ರಾಜಪ್ಪ, ಮಹಿಳೆಯರು, ಸೇರಿದಂತೆ ಕೊಲಂಬೋ ಸಮುದಾಯಗಳ ಯುವಕರು ಯುವತಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
