Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಮಂಜುನಾಥ ಹಿರೇಮನಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ನೇಮಕ

ಮಂಜುನಾಥ ಹಿರೇಮನಿ ರಾಜ್ಯ ಸಂಘಟನಾ                 ಕಾರ್ಯದರ್ಶಿಗಳಾಗಿ ನೇಮಕ

ಹಾವೇರಿ: ಹಾವೇರಿಯಲ್ಲಿ ನಡೆದ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವಟಪರ್ವಿ ಗ್ರಾಮದ ಶ್ರೀ ಮಂಜುನಾಥ ಹಿರೇಮನಿ ಅವರನ್ನು ಡಾ. ಬಾಬು ಜಗಜೀವನರಾಮ್ ಆದಿಜಾಂಬವ ಯುವ ಬ್ರಿಗೇಡ್ (ರಿ) ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.

ತಳ ಸಮುದಾಯದ ಬಗೆಗಿರುವ ಇವರ ಕಾಳಜಿ, ಸಂಘಟನಾ ಚತುರತೆ, ಸಾಮಾಜಿಕ ಕಳಕಳಿ, ಸಾಹಿತ್ಯ ಮತ್ತು ನಾಡು-ನುಡಿಯ ಕುರಿತ ಅಪಾರ ಕಾಳಜಿಯನ್ನು ಪರಿಗಣಿಸಿ ರಾಜ್ಯಾಧ್ಯಕ್ಷರಾದ ಶ್ರೀ ಏಳುಕೋಟೆಪ್ಪ ಪಾಟೀಲ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಂಗನಾಥ ಎನ್, ಹನುಮಂತ ಕಡದಳ್ಳಿ , ರಾಜ್ಯ ಉಪಾಧ್ಯಕ್ಷರಾದ ರವಿ ಇಟ್ನಾಳ, ಆಂಜಿನಪ್ಪ ಕೋಲಾರ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಯಲಬುರ್ಗಾ, ಕುಕನೂರು ತಾಲ್ಲೂಕಿನ 34 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ

satyadarshana

ಕನ್ನಡದಲ್ಲಿ ಮಾತನಾಡಿ ಬರೆಯುವುದರ ಮೂಲಕ ಕರುನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ :ಸಚಿವ ಬಿ.ಸಿ.ಪಾಟೀಲ

satyadarshana

ಗದಗ ಜಿಲ್ಲೆಯ ಹಾಳಕೇರಿ ಗ್ರಾಮದಲ್ಲಿ ದಲಿತ ಕುಂದು ಕೊರೆತೆ ಸಭೆ

satyadarshana

Leave a Comment