Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿಸಿನಿಮಾ

ರಾಯರ ಹೆಸರು ಮನಸಾರೆ ಹೇಳುತ್ತ “ರಾಜಾಸೀಟ್” ಚಿತ್ರ ತಂಡಕ್ಕೆ ಶುಭ ಕೋರಿದ ನವರಸ ನಾಯಕ.

 

ಬೆಂಗಳೂರಿನ ಬಂಡಿ ಮಹಾಕಾಳಿ ಅಮ್ಮನವರ ದೇವಸ್ಥಾನ.. ಹೊಸ ಸಿನಿಮಾಗಳ ಮುಹೂರ್ತಕ್ಕೆ ಪುಣ್ಯಕ್ಷೇತ್ರ ಇದ್ದಂಗೆ.. ಬೆಳ್ಳಂಬೆಳಗ್ಗೆ ಹೊಸಬರ ಒಂದು ಸಿನಿಮಾ ಮುಹೂರ್ತವಾಯ್ತು.. ಆ ಮುಹೂರ್ತಕ್ಕೆ ಟೈಟಲ್ ಪೋಸ್ಟರ್ ರಿವೀಲ್​​ಗೆ ಕರ್ನಾಟಕದ ನಗೆವೀರ ನವರಸ ನಾಯಕ ಜಗ್ಗೇಶ್ ಸಾಥ್ ನೀಡಿದ್ರು. ಮನಸಾರೆ ರಾಯರ ಹೆಸರೇಳುತ್ತಾ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ರು.. ಅಷ್ಟಕೂ ಯಾವುದು ಆ ಸಿನಿಮಾ ಅನ್ನೋ ಪ್ರಶ್ನೆಗೆ ಉತ್ತರ ರಾಜಾ ಸೀಟ್​​​.ಸಿನಿಮಾ ಅನ್ನೋದೆ ಒಂದು ಸುಂದರ ಕನಸು.. ಆ ಕನಸಿನ ಹಿಂದೆ ಬಿದ್ರೆ ಮಾತ್ರ ಆಗೋದು ಸಿನಿಮಾ ನನಸು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದ ಸಿನಿಮಾ ಕನಸು ಮನಸಿನ ವ್ಯಕ್ತಿ ಈಗ ಪ್ರೊಡ್ಯೂಸರ್ ಆಗ್ತಿದ್ದಾರೆ. ಆ ಕನಸಿನ ಸಿನಿಮಾ ಮನಸಿಗೆ ತೋತಾಪುರಿ ನಾಯಕ ನವರಸ ನಾಯಕ ಜಗ್ಗೇಶ್ ಮನಸಾರೆ ಹರಸಿ ಹಾರೈಸಿದ್ದಾರೆ.ರಾಜಾ ಸೀಟ್​.. ಮೇಘನಾ ರಾಜ್ ಅವರಿಗೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ‘ಇರುವುದೆಲ್ಲವ ಬಿಟ್ಟು’ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಕಾಂತ ಕನ್ನಲ್ಲಿ ನಿರ್ದೇಶನ ಮಾಡಲು ಹೊರಟಿರೋ ಸಿನಿಮಾ.. ಇನ್ನು ಸಿನಿಮಾದ ನಿರ್ಮಾಪಕ ಹತ್ತು ವರ್ಷಕ್ಕೂ ಹೆಚ್ಚು ಕಾಲ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಶ್ರೀರಾಮ್ ನಿರ್ಮಾಣದ ಚೊಚ್ಚಲ ಸಿನಿಮಾ.. ಆರ್ವ ಅನ್ನೋ ಕಿರುತೆರೆಯ ಕಲಾವಿದ ಈ ರಾಜಾ ಸೀಟ್ ಸಿನಿಮಾದ ನಾಯಕ ನಟ.. ಶೂಟಿಂಗ್​ ಹೊರಡಲು ಸಿದ್ಧವಾಗಿರೋ ರಾಜಾ ಸೀಟ್ ಸಿನಿಮಾದ ಟೈಟಲ್ ಪೋಸ್ಟರ್ ಲಾಂಚ್ ಮಾಡಿ ನವರಸ ನಾಯಕ ಜಗ್ಗೇಶ್ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

Related posts

ಸೌಜನ್ಯಶೀಲ, ಅತ್ಯಂತ ನಿಗರ್ವಿ, ಅಜಾತಶತ್ರು ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭಕ್ಕೆ ಮಾನ್ಯತೆ ತಂದಕೊಟ್ಟಿರುವ ಪತ್ರಕರ್ತ ಮಂಜುನಾಥಗೆ ಮತ್ತೊಂದು ಉನ್ನತ ಹುದ್ದೆ

satyadarshana

ಏ.14 ರಂದು ಡಾ. ಅಂಬೇಡ್ಕರ್‌ರವರ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ಜನ್ಮ ದಿನಾಚರಣೆ

satyadarshana

ಸ್ವಗ್ರಾಮ ಫೆಲೋಶಿಪ್ ಲೋಕಾರ್ಪಣೆ ಸಮಾರಂಭ ಗ್ರಾಮಗಳ ವಿಕಾಸ ಸ್ವಾವಲಂಭನೆಯಲ್ಲಿ ಸ್ವಗ್ರಾಮ ಫೆಲೋಶಿಪ್ ಅನುಕೂಲಕರ.ವಿ.ಆರ್.ಎಲ್ ಸಮೂಹದ ಅಧ್ಯಕ್ಷ ವಿಜಯ ಸಂಕೇಶ್ವರ .

satyadarshana

Leave a Comment