ತಾರೀಖು 16ನೇ ಏಪ್ರಿಲ್ 2026ರ ಶನಿವಾರ ಬೆಳಿಗ್ಗೆ 11 ರಿಂದ ಮದ್ಯಾಹ್ನ 4 ರವರೆಗೆ, ಶ್ರೀ ಪರಾಭವ ನಾಮ ಸಂವತ್ಸರ, ವೈಶಾಖ ಮಾಸೆ ವಸಂತ ಋತು, ಉತ್ತರಾಯಣ ಕೃಷ್ಣ ಪಕ್ಷದ “36ನೇ ಅಮಾವಾಸ್ಯೆ ಪೂಜೆ”ಗೆ, ತಾವೆಲ್ಲರು ಸಹ-ಕುಟುಂಬ ಸಮೇತ ಆಗಮಿಸಿ, ಶ್ರೀ ನಾಗಚೌಡೇಶ್ವರಿ ಅಮ್ಮನವರ ಮತ್ತು ಶ್ರೀ ಪಂಚನಾಗದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಸೇವಾಕರ್ತರಿಗೆ : ಶ್ರೀ ನಾಗಚೌಡೇಶ್ವರಿ ಅಮ್ಮನವರು ಮತ್ತು ಶ್ರೀ ಪಂಚನಾಗದೇವರ ಪ್ರತಿ ಅಮಾವಾಸ್ಯೆ ಕುಟುಂಬ ಪೂಜಾ ಸೇವೆಗೆ : 3001/- (6 ಹಾರಗಳು, ಅಮ್ಮನವರಿಗೆ ಸೀರೆ, ಹೂ-ಹಣ್ಣು-ಕಾಯಿ, ಪೂಜಾ ಸಾಮಗ್ರಿಗಳು ಮತ್ತು ಅಭಿಷೇಕ, ಪ್ರಸಾದ ಸೇರಿವೆ)
ವಿ.ಸೂ. : ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಒಳಗಡೆ ಕಟ್ಟೆ ಹತ್ತಿ ಹೋಗಬಾರದೆಂದು ಮನವಿ ಮಾಡುತ್ತೇನೆ. ಅಮಾವಾಸ್ಯೆ ದಿನ ಮಾತ್ರ ವಿಶೇಷ ದರ್ಶನ ನೀಡುವ ಕ್ಷೇತ್ರ. ನಡೆದುಕೊಳ್ಳುವವರು, ಸಂಕಲ್ಪ ಮಾಡಿ. 5 ಅಮಾವಾಸ್ಯೆ ಪೂಜೆ ಪೂರೈಸಬೇಕು.
ಪೂಜೆ, ಸೇವೆ ಮತ್ತು ಅಭಿವೃದ್ಧಿಗಾಗಿ ದಾನಿಗಳು, ನೋಂದಾಯಿಸಿಕೊಳ್ಳುವವರು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ : ರಮೇಶ ಸುರ್ವೆ ಸಂಚಾಲಕರು. ಮೊಬೈಲ್ : 9845307327.
