Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

9ನೇ ದಿನದಲ್ಲಿ ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಮುಕ್ತಗೊಳಿಸಿ ಹೋರಾಟ 

9ನೇ ದಿನದಲ್ಲಿ ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಮುಕ್ತಗೊಳಿಸಿ ಹೋರಾಟ 

ಕೊಪ್ಪಳ : ತಾಲೂಕಿನಲ್ಲಿ ಹತ್ತಾರು ಸಾವಿರ ಜಾನುವಾರುಗಳನ್ನು ರೈತರು ಸಾಕುತ್ತಾರೆ. ಜಿಲ್ಲಾಧಿಕಾರಿಗಳು ಬಸಾಪುರ ಕೆರೆಗೆ ಕಾಂಪೌಂಡ್ ಕಟ್ಟಿರುವುದನ್ನು ತೆರವು ಮಾಡಿ ಬಲ್ಡೋಟ ಅತಿಕ್ರಮಣದಿಂದ ಬಿಡಿಸಿ ಕೊಡುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಅಸಮಾಧಾನ ವ್ಯಕ್ತಪಡಿಸಿದರು. ದಿ:06.052026 ಬೆಂಗಳೂರಿನಲ್ಲಿ ಕೆರೆ ಪ್ರಾಧಿಕಾರದಲ್ಲಿ ವಿಚಾರಣೆ ನಡೆದು ಕೆರೆ ಮಂಜೂರಿ ಷರತ್ತು ಉಲ್ಲಂಘನೆ ಆಗಿದ್ದರ ಮೇಲೆ ಕೆರೆ ಬಿಡಿಸಿಕೊಡಲು ನಿರ್ದೇಶನ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದು ಬಿಟ್ಟರೆ ಇದುವರೆಗೆ ಕೆರೆ ತೆರವು ಮಾಡಿ ಕೊಡುತ್ತಿಲ್ಲ. ಬೇಸಿಗೆಯಲ್ಲಿ ಕೆರೆ ಸುತ್ತಲಿರುವ ಸಾವಿರಾರು ಕುರಿ, ಹಸುಗಳು ನೀರಿಲ್ಲದೇ, ಮೇವಿಲ್ಲದೆ ಬಡಕಲು ಎಲುಬಿನ ಹಂದರದಂತಾಗಿ ದಾರಿಯಲ್ಲಿ ನಡೆದು ಹೋಗುತ್ತಿರುವಾಗಲೇ ಮಧ್ಯದಲ್ಲಿ ಬಿದ್ದು ಸಾಯುತ್ತಿವೆ. ಇಂಥ ಭೀಕರ ಸಂದರ್ಭದಲ್ಲಿ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿದಿನಗಳು ನೆರವಿಗೆ ಬಂದು ಬಸಾಪುರ ಕೆರೆ ಮುಕ್ತಗೊಳಿಸಬೇಕು ಎಂದರು.

ಧರಣಿಯಲ್ಲಿ ಮೂಕಪ್ಪ ಮೇಸ್ತ್ರಿ ಬಸಾಪುರ, ಕನಕಪ್ಪ ಪೂಜಾರ ಇಂದರಗಿ, ರೈತ ಮುಖಂಡ ಫಕ್ಕೀರಗೌಡ ಕಾಸನಕಂಡಿ, ಯಂಕಪ್ಪ ಕಾಸನಕಂಡಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಂತ ತಳವಾರ ಬಸಾಪುರ, ನಾಗಪ್ಪ ಗೋಡೆಕಾರ ಕಿನ್ನಾಳ ಮುಂತಾದವರು ಇದ್ದರು.

Related posts

ರಸ್ತೆ ಸುರಕ್ಷತೆ, ನಿಯಮಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು: ಡಾ.ಸುರೇಶ ಬಿ.ಇಟ್ನಾಳ

satyadarshana

ಕಳಪೆ ಕಾಮಗಾರಿ ತಪಾಸಣೆಗೆ ಆಗ್ರಹ.

satyadarshana

ಅಟಲ್ ಭೂ ಯೋಜನೆ : ಅನುಷ್ಟಾನ ಹಾಗೂ ಮೇಲ್ವಿಚಾರಣೆ ಸಭೆ

satyadarshana

Leave a Comment