Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

70 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ:ಶಾಸಕ ಜಿ ಎಸ್ ಪಾಟೀಲ

ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಗದಗ ತಾಲೂಕ ಪಂಚಾಯತ ಗಜೇಂದ್ರಗಡ ಪಂಚಾಯತ ರಾಜ್ ಇಂಜನಿಯರಿಂಗ್ ವಿಭಾಗ, ಗದಗ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ 70 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಜಿ ಎಸ್ ಪಾಟೀಲ್, ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ 1.2 ಕೋಟಿ ಕುಟುಂಬಗಳ ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದೆ ಆದರೆ ವಿರೋಧ ಪಕ್ಷ ಅವುಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವದು ಖೇದಕರ ಎಂದರು

ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ನಿಗದಿತ ಸಮಯದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಖಾದರಬಿ ಮುಜಾವರ, ಈರವ್ವ ಸೂಡಿ,ವೀರಣ್ಣ ಶೆಟ್ಟರ್, ಶಿವಕುಮಾರ್ ಪಟ್ಟಣಶೆಟ್ಟಿ, ರಾಘವೇಂದ್ರ ಕುಲಕರ್ಣಿ, ಹುಸೇನಸಾಬ ಬೆಳಟ್ಟಿ, ಅಬ್ದುಲ್ ಸಾಬ್ ಇಟಗಿ, ನಿಂಗಪ್ಪ ಕಾಶಪ್ಪನವರ, ಚನ್ನಪ್ಪ ನೂಲ್ವಿ,ಬಸವರಾಜ ಬಿದರೂರ, ಬೀರಪ್ಪ ಮಾರಣಬಸರಿ,ಜಗದೀಶ್ ಹಿರೇಮಠ, ಶಶಿಧರ ಒಕ್ಕಳರ, ಇತರರು ಉಪಸ್ಥಿತರಿದ್ದರು.

 

 

Related posts

ʼಸಾಧನೆ ಶಿಖರವನ್ನೇರಲು ಪಣ ತೊಡಿʼ ʼದೇಶ ಮೆಚ್ಚುವಂತ ಸಾಧನೆ ಮಾಡಲು ಮುಂದಾಗಿʼ ʼಜ್ಞಾನದ ಜೊತೆಗೆ ಸಾಮಾಜಿಕ ಕಳಕಳಿ ಇರಲಿʼ

satyadarshana

ದೀಪಾವಳಿ ಹಬ್ಬಕ್ಕೆ ವಾಯವ್ಯ ಸಾರಿಗೆ ಸಂಸ್ಥೆಯಿಂದ 500ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ

satyadarshana

ಬಸವರಾಜ್ ರಾಯರೆಡ್ಡಿಗೆ. ಮತದಾರರಿಂದ ಕುರಿ ಕಾಣಿಕೆ

satyadarshana

Leave a Comment