Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಬಳೂಟಗಿ ಗ್ರಾಮದಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಜಾಗೃತಿ ಕಾರ್ಯಕ್ರಮ.

ಯಲಬುರ್ಗಾ: ತಾಲ್ಲೂಕಿನ ಬಳೂಟಗಿ ಗ್ರಾಮದಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಜಾಗೃತಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಯಲಬುರ್ಗಾ ಶಾಖೆಯ ವ್ಯವಸ್ಥಾಪಕ ಬಿ.ಜಿ.ವಡಗೇರಿ ಮಾತನಾಡಿ,’ಪ್ರತಿಯೊಂದು ವ್ಯವಹಾರ ಬ್ಯಾಂಕ್‌ ಮೂಲಕವೇ ನಡೆಯುತ್ತಿದೆ

ಅಲ್ಲದೇ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಪ್ರತಿಯೊಂದು ಸೇವೆಯು ನಮ್ಮ ಬೆರಳ ತುದಿಯಲ್ಲಿ ನಡೆಯುತ್ತಿವೆ. ಇಂಥ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆ ನಿರೀಕ್ಷೆ ಮೀರಿ ಪ್ರಗತಿ ಕಂಡಿದೆ. ಇದರಿಂದ ಸಾಕಷ್ಟು ಗ್ರಾಹಕರಿಗೆ ತ್ವರಿತವಾಗಿ ಸೇವೆ ಲಭ್ಯವಾಗುತ್ತಿದೆ. ಅಲ್ಲದೇ ಅನಗತ್ಯ ತೊಂದರೆಗಳಿಗೆ ಅವಕಾಶ ಇಲ್ಲದಾಗಿದೆ. ಆದರೆ ವ್ಯವಹರಿಸುವಾಗಿ ಹೆಚ್ಚಿನ ಜಾಗೃತಿ ವಹಿಸಿರುವುದು ಮುಖ್ಯವಾಗಿರುತ್ತದೆ ಎಂದರು. ಆರ್ಥಿಕ ಸಾಕ್ಷರತೆಯ ಸಮಾಲೋಚಕ ಬಿ.ಪಂಪನಗೌಡ ಮಾತನಾಡಿದರು.

ಕೊಪ್ಪಳದ ಎಸ್‍ಬಿಐ ಬ್ಯಾಂಕ್‌ನ ವ್ಯವಸ್ಥಾಪಕ ಅವ್ಯಪ್ಪ ಮಾಲಗಿತ್ತಿ, ಸಹಾಯಕ ವ್ಯವಸ್ಥಾಪಕ ಶಿವರಾಜ ಹಾದಿಮನಿ, ದೊಡ್ಡಬಸಪ್ಪ ಸೇರಿ ಅನೇಕರು ಇದ್ದರು.

Related posts

ಡಿಸಿ ಕಾರು ಪೆಟ್ರೋಲ್‌ಗೆ ಹಣ ಇಲ್ಲ:ಕುರಿ ಸತ್ತರೆ ಪರಿಹಾರ ಇಲ್ಲ..ಯತ್ನಾಳ್‌

satyadarshana

ಕಾರಟಗಿ: ಭೂದಾಖಲೆಗಳ ಗಣಕೀಕರಣಕ್ಕೆ ಸಚಿವರಿಂದ ಚಾಲನೆ

satyadarshana

ವೀರೇಶ್ವರ ಪುಣ್ಯಾಶ್ರಮ, ಅಂಧ ಮಕ್ಕಳ ಶಾಲೆ ಗದಗ,ಮುದ್ರಣಾ ಕಾಶಿ, ಸಂಗೀತದ ನಾಡಿಗೆ ಈ ಬಾರಿ 2 ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ.

satyadarshana

Leave a Comment