Satya Darshana
ಬಿಸಿ ಬಿಸಿ ಸುದ್ದಿ
ಸಿನಿಮಾ

ಹಿಂದೂ, ಕ್ರಿಶ್ಚಿಯನ್ ಸಂಪ್ರದಾಯದಂತೆ ರಾಯನ್ ನಾಮಕರಣ ಮೇಘನಾ ರಾಜ್​

ಎಲ್ಲದಕ್ಕಿಂತ ಮುಖ್ಯವಾಗಿ ಚಿರು ಮಾನವೀಯತೆಗೆ ಹೆಚ್ಚು ಗೌರವ ಕೊಡುತ್ತಾರೆ. ಹೀಗಾಗಿ ನಾವು ನಮ್ಮ ಮಗನ ನಾಮಕರಣವನ್ನು ಎರಡು ಸಂಪ್ರದಾಯಗಳ ಪ್ರಕಾರ ನೆರವೇರಿಸಿದ್ದೇವೆ. ಸಂಸ್ಕೃತದಲ್ಲಿ ರಾಯನ್ ಎಂದರೆ ಯುವರಾಜ ಎಂದರ್ಥ. ಆಂತೆಯೇ ಈ ಹೆಸರು ಎಲ್ಲ ಧರ್ಮಕ್ಕೂ ಸೇರುತ್ತದೆ. ಅದು ವಿಭಿನ್ನ ಆವೃತ್ತಿ, ಉಚ್ಛಾರ ಆಗಿರಬಹುದು, ಆದರೆ ಅರ್ಥ ಮಾತ್ರ ಒಂದೇ. ನಮ್ಮ ಹೆಮ್ಮೆ, ನಮ್ಮ ರಾಜ ರಾಯನ್ ರಾಜ್ ಸರ್ಜಾ ಹೆಸರನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ನನ್ನ ಮಗ ಅಪ್ಪನಂತೆ ಬೆಳೆಯುತ್ತಾನೆ, ಜನರು ಹೇಗಿದ್ದಾರೋ ಹಾಗೆ ಅವರನ್ನು ಪ್ರೀತಿಸುತ್ತಾನೆ, ಯಾವ ಬ್ಯಾಕ್‌ಗ್ರೌಂಡ್ ಎಂದು ಲೆಕ್ಕಿಸದೆ ಮಾನವೀಯತೆ ಆಧಾರದ ಮೇಲೆ ಕೆಲಸ ಮಾಡುತ್ತಾನೆ. ಇಂದಿನಿಂದ ನಿನ್ನು ಆಳುವ ಸಮಯ ಆರಂಭವಾಗಿದೆ. ” ಎಂದು ಬರೆದುಕೊಂಡಿದ್ದಾರೆ.
ಗಂಡು ಮಗು ಆಗುತ್ತೆ ಅಂತ ಚಿರುಗೆ ಮೊದಲೇ ಗೊತ್ತಿತ್ತು
ಮೇಘನಾ ರಾಜ್​ ಪ್ರಗ್ನೆಂಟ್​ ಆಗಿದ್ದಾಗ ಚಿರು ಮತ್ತು ಮೇಘನಾಗೆ ಆಗಾಗ ಕ್ಯೂಟ್​ ಜಗಳ ನಡೆಯುತ್ತಲೇ ಇತ್ತಂತೆ. ಚಿರು ಗಂಡು ಅಂತ ಮೇಘನಾ ಇಲ್ಲಾ ಹೆಣ್ಣು ಅಂತಾ.. ಚಿರು ಬಗ್ಗೆ ನೆಗೆಟಿವ್​ ಆಗಿ ಕಾಮೆಂಟ್​ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ನನಗೆ ಸಮಯವೂ ಇಲ್ಲ, ಇಷ್ಟವೂ ಇಲ್ಲ.. ಚಿರುನ ನಿಜವಾಗಿ ಅರ್ಥ ಮಾಡಿಕೊಂಡವರು ಯಾವತ್ತೂ ಈ ರೀತಿ ಮಾತನಾಡಲ್ಲ ಅಂತ ಬೇಸರದಿಂದಲೇ ಉತ್ತರಿಸಿದ್ದಾರೆ.
ನನ್ನ ಹಿಂದೆ ಅಭಿಮಾನಿಗಳಿದ್ದಾರೆ ಅವರೇ ನನ್ನ ಧೈರ್ಯ
ನನ್ನ ಬಗ್ಗೆ ಅಥವಾ ನನ್ನ ಫ್ಯಾಮಿಲಿ ಬಗ್ಗೆ ಯಾರು ಏನಂದ್ರೂ ಪರವಾಗಿಲ್ಲ. ನನ್ನ ಹಿಂದೆ ನನ್ನ ಮತ್ತು ಚಿರು ಅಭಿಮಾನಿಗಳು ಇದ್ದಾರೆ. ಅವರೇ ನನ್ನ ಧೈರ್ಯ ಅಂತ ಮೇಘನಾ ರಾಜ್ ಧೈರ್ಯದಿಂದ ಹೇಳಿದ್ದಾರೆ..

Related posts

ಸತ್ಯದರ್ಶನ ಕನ್ನಡ ದಿನಪತ್ರಿಕೆ. 11 04.2023

satyadarshana

ಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು

cradmin

ತುಂಬಾ ನಿರೀಕ್ಷೆಯಿಂದ ಕಾಯ್ತಿರೋ ಜೇಮ್ಸ್ ವರ್ಲ್ಡ್​ವೈಡ್​ ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶಗಳಲ್ಲಿ ಜೇಮ್ಸ್ ಅಬ್ಬರಿಸುತ್ತಿದ್ದಾನೆ.

satyadarshana

Leave a Comment