ಗಜೇಂದ್ರಗಡ :ಸ್ಥಳೀಯ ಠಾಣೆಯ ಪಿಎಸ್ಐ ರಾಘವೇಂದ್ರ
ಕ್ರಿಕೆಟ್ ಬೆಟ್ಟಿಂಗ್ ಕೇಸ್ ಗೆ ಸಂಬಂಧಿಸಿದಂತೆ ಜಾಮೀನಿಗಾಗಿ ಒಂದುವರೆ ಲಕ್ಷ ಲಂಚ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಲೆಗೆ ಬಿದ್ದಿದ್ದಾರೆ . ಬೆಟ್ಟಿಂಗ್ ಕೇಸ್ ಗೆ ಸಂಬಂಧಪಟ್ಟಂತೆ ಒಂದುವರೆ ಲಕ್ಷಕ್ಕೆ ಡೀಲ್ ಮುಗಿದಿದ್ದು ಎನ್ನಲಾಗುತ್ತಿದ್ದೂ.ಹಣ ಕೊಡುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ . ಪಿಎಸ್ಐ ರಾಘವೇಂದ್ರ ಜೊತೆ ಇಬ್ಬರು ಪಿ ಸಿ ಗಳು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕ್ರಿಕೆಟ್ ಬೆಟ್ಟಿಂಗ್ ಧಂದೆ ಗಜೇಂದ್ರಗಡದಲ್ಲಿ ಜೊರಾಗಿದೆ. ಐಪಿಎಲ್ ಅಂದ್ರೆ, ಹಲವರಿಗೆ ಬೆಟ್ಟಿಂಗ್ ನಡೆಸುವುದೇ ಕೆಲಸ. ಐಪಿಎ್ಲಲ್ ಅಂದ್ರೆ, ಬೆಟ್ಟಿಂಗ್ ಧಂದೆ ಎಂಬಂತಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಗಜೇಂದ್ರಗಡದಲ್ಲಿ ನಡೆದ ಲೋಕಾಯುಕ್ತದಾಳಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಧಾರವಾಡ ಲೋಕಾಯುಕ್ತ ಎಸ್ ಪಿ ಸತೀಶ್ ಚಿಟಗುಬ್ಬಿ, ಇವರ ನೇತೃತ್ವದಲ್ಲಿ ದಾಳಿ ನಡೆದಿದೆ. ಅಜೀಜ್ ಕಲಾದಗಿ ತನಿಖಾಧಿಕಾರಿ ಸೇರಿದಂತೆ ಇತರಿದ್ದರು.
ಫಿರ್ಯಾದಿ ಪ್ರಕರಣ ಹಿನ್ನೆಲೆ ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
