ಯಲಬುರ್ಗಾ : ತಾಲ್ಲೂಕಿನ ಕುದುರಿಮೋತಿ. ಗ್ರಾಮದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರೆಡ್ಡಿ ಅವರು ಚುನಾವಣೆಯ ಪ್ರಚಾರ ಸಭೆಗೆ ಬಂದಿದ್ದ ಅವರಿಗೆ ಅಭಿಮಾನಿಗಳು ಕುರಿ, ಟಗರು ಕಾಣಿಕೆಯಾಗಿ ನೀಡಿದರು. ಕಂಬಳಿ ಹೊದಿಸಿ
ಸನ್ಮಾನಿಸಿ ಅವರನ್ನು ಗ್ರಾಮದಲ್ಲಿ ಅದ್ದೂರಿಯಾಗಿ . ತಮಟೆ, ಡೊಳ್ಳು ಬಾರಿಸುವ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಬಸವರಾಜ್ ರಾಯರೆಡ್ಡಿ ಹಾಗೂ ಇತರೆ ಮುಖಂಡರನ್ನು ವೇದಿಕೆಗೆ ಕರೆತರಲಾಯಿತು. ಅವರ ಮೇಲೆ ದಾರಿ ಉದ್ದಕ್ಕೂ ಹೂವ ಹಾಕುವ ಮೂಲಕ ಅದ್ದೂರಿ ಸಾಗತ ಮಾಡಿಕೊಂಡರು .
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ನಾನು ಶಾಸಕನಾದ ನಮ್ಮ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಇರಲಿಲ್ಲ. ರಸ್ತೆ ಚರಂಡಿ ಶಾಲೆ ವಿದ್ಯುತ್. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿ ರಾಜ್ಯದಲ್ಲಿ ಮಾದರಿ ತಾಲೂಕನ್ನಾಗಿ ಮಾಡಿದ್ದೇನೆ ಇನ್ನು ನಾಲ್ಕು ಪಟ್ಟು ಅಭಿವೃದ್ಧಿ ಮಾಡುತ್ತೇನೆ ಬಿಜೆಪಿಯವರ ಸುಳ್ಳು ಭಾಷಣಕ್ಕೆ ಕಿವಿ ಕೊಡದೆ ಸ್ವಚ್ಛ ಪ್ರಾಮಾಣಿಕ ಆಡಳಿತ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲಿಸಿ ಎಂದು. ಮತದಾರರಿಗೆ ಮನವಿ ಮಾಡಿದರು. ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ. ಹಾಲುಮತ ಸಮಾಜದ ಮುಖಂಡ ವೀರನಗೌಡ ಬಳೂಟಗಿ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಶೋಕ್ ತೋಟದ ಇದ್ದರು
