ಗದಗ : ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶನಿವಾರ ಸಂಜೆ ಶ್ರೀ ಮಾರುತೇಶ್ವರ ಮಹಾ ರಥೋತ್ಸವ ಸಕಲ ಮಂಗಲಕರ ವಾದ್ಯಗಳ ಮೂಲಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜನಪದ ಕಲಾ ತಂಡಗಳ ನಡುವೆ ಜರಗಿತು.
ಈ ರಥೋತ್ಸವದಲ್ಲಿ ಯುವಕರು ಬಾಳೆ ಹಣ್ಣಿನ ಮೇಲೆ 2023 ರ ಮುಂದಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಎಂದು ಬರೆದ ಅಭಿಮಾನಿ ಕಿರಣ್ ಜೋಗಿನ , ಸುರೇಶ್ ಆಲೂರು
ಬಾಳೆ ಹಣ್ಣನ್ನು ತೇರಿಗೆ ಎಸೆದು ಹರಕೆಯನ್ನು ತೀರಿಸಿದರು.
ಪುನೀತ್ ರಾಜ್ ಕುಮಾರ್ ಅಪ್ಪು ಅವರ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಹಿಡಿದುಕೊಂಡು ಡಿಜೆ ಸಾಂಗ್ ಅನ್ನು ಹಾಕಿಕೊಂಡು ಕುಣಿದು ಕುಪ್ಪಳಿಸಿದರು.
ರಥವು ಪಾದಗಟ್ಟಿ ತಲುಪಿದ ನಂತರ ಒಂದು ಗಂಟೆಗಳ ಕಾಲ ಆಕಾಶದೆತ್ತರಕ್ಕೆ ಹಾರುವ ಸಿಡಿಮದ್ದು ಪಟಾಕಿಗಳನ್ನು ಸುತ್ತು ಸಂಭ್ರಮಿಸಿದರು .
