ಗದಗ : ನರಗುಂದ ಹೊರವಲಯದ ಬೀರಪ್ಪನ ದೇವಸ್ಥಾನದ ಅಂಗಳದಲ್ಲಿ ಹಾಕಿದ್ದ ಗೋವಿನ ಜೋಳದ ರಾಶಿಯಲ್ಲಿ ವಾಸವಾಗಿದ್ದ ನಾಗರಹಾವು ಹಾಗೂ ನೀರು ಹಾವನ್ನ ರಕ್ಷಿಸಲಾಗಿದೆ..
ಬೀರಪ್ಪನ ಗುಡಿಯ ಬಳಿ ರೈತ ಸಿದ್ದಪ್ಪ ಗೋವಿನ ಜೋಳದ ತೆನೆಗಳನ್ನ ರಾಶಿಹಾಕಿದ್ರು.. ತೆನೆಗಳನ್ನ ಕಾಳು ಮಾಡುವ ಉದ್ದೇಶದಿಂದ ರಾಶಿ ತೆಗೆಯುತ್ತಿದ್ದವೇಳೆ ಹಾವು ಕಂಡು ಬಂದಿದೆ.. ಕೂಡ್ಲೆ ವಿಷಯವನ್ನ ಉರಗ ಪ್ರೇಮಿ ಬುಡ್ನೆಸಾಬ್ ಅವರಿಗೆ ತಿಳಿಸಲಾಯ್ತು.. ಸ್ಥಳಕ್ಕೆ ಬಂದಿದ್ದ ಸ್ನೇಕ್ ಬುಡ್ನೆ ಸಾಬ್, ನೀರುಹಾವು ಹಾಕಿದ್ದ 40 ಮೊಟ್ಟೆಗಳ ಸಮೇತ ಹಾವನ್ನ ರಕ್ಷಿಸಿದ್ದಾರೆ.. ಜೊತೆಗೆ ಅದೇ ರಾಶಿಯ ಇನ್ನೊಂದೆಡೆ ವಾಸವಾಗಿದ್ದ ನಾಗರಹಾವನ್ನೂ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ..
