Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ರಾಜ್ಯದ ಬಹುತೇಕ ಕಡೆ ಮುಂಗಾರು ಪೂರ್ವ ಮಳೆಯಿಂದ ಜನಜೀವನ ಅಸ್ತವ್ಯಸ್ತ, ಬೆಳೆಗಳಿಗೆ ಭಾರಿ ಹಾನಿ

ಕೊಪ್ಪಳ :(ಮೇ.20):ಕೊಪ್ಪ​ಳ​ದ ಹಿರೇಸಿಂದೋಗಿ ಗ್ರಾಮದ ಚನ್ನಳ್ಳ ತುಂಬಿ ಕಾಟ್ರಳ್ಳಿ ಶಾಲೆಗೆ ನೀರು ನುಗ್ಗಿದ್ದರಿಂದ ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ಮಕ್ಕ​ಳನ್ನು ಮನೆಗೆ ಕಳು​ಹಿ​ಸ​ಲಾ​ಗಿದೆ. ಅದೇ ರೀತಿ ಚಿತ್ರದುರ್ಗ ಹೊರವಲಯದ ಮಲ್ಲಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಕಾರಣ ಸಮೀ​ಪದ ಸರ್ಕಾರಿ ಶಾಲೆಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿ​ಸಿ​ದ್ದು, 2 ದಿನ ಶಾಲೆಗೆ ರಜೆ ಘೋಷಿ​ಸ​ಲಾ​ಗಿ​ದೆ.ಎಲ್ಲಿ, ಏನು ಹಾನಿ?

– ಕೊಪ್ಪ​ಳ​ದಲ್ಲಿ ಸಂಗ​ನಾ​ಳ-ಕರ​ಮುಡಿ ಗ್ರಾಮದ ನಡು​ವಿ​ನ ಸೇತುವೆ ಕೊಚ್ಚಿಹೋಗಿ 4 ಗ್ರಾಮ​ಗಳ ಸಂಪರ್ಕ ಕಡಿ​ತ

– ಮಂಡ್ಯದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ನಡುವೆ ಸೇತುವೆ ಕೊಚ್ಚಿಹೋಗಿ ವಾಹನ ಸಂಚಾರ ಅಸ್ತವ್ಯಸ್ತ

– ದಾವ​ಣ​ಗೆ​ರೆ​ಯಲ್ಲಿ 2 ಸಾವಿರ ಎಕ​ರೆಗೂ ಹೆಚ್ಚು ಬೆಳೆ ಹಾನಿ​; ಪಂಪ್‌ಸೆಟ್‌ ರಿಪೇರಿಗೆ ಹೋಗಿದ್ದ ಯುವಕ ಸಾವು

– ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಶಿವ​ಮೊ​ಗ್ಗ​ ಶಾಲೆಗಳಿಗೆ ನಿನ್ನೆ, ಉಡುಪಿ ಶಾಲೆಗಳಿಗೆ ಇಂದು ರಜೆ ಘೋಷಣೆ

– ಚಿತ್ರದುರ್ಗದ ಮಲ್ಲಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದು ಸಮೀಪದ ಶಾಲೆಗೆ ನುಗ್ಗಿದ ನೀರು; ಶಾಲೆಗೆ 2 ದಿನ ರಜೆ

ಮಳೆ​ಯಿಂದಾಗಿ ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಶಿವ​ಮೊ​ಗ್ಗ​ದಲ್ಲಿ ಶಾಲೆ​ಗ​ಳಿಗೆ ಗುರುವಾರ ರಜೆ ಘೋಷಿ​ಸ​ಲಾ​ಗಿತ್ತು. ಉಡು​ಪಿ​ಯಲ್ಲಿ ಭಾರೀ ಮಳೆಯ ಮುನ್ಸೂ​ಚನೆ ಹಿನ್ನೆ​ಲೆ​ಯಲ್ಲಿ ಶುಕ್ರ​ವಾರ ಶಾಲೆ​ಗ​ಳಿಗೆ ರಜೆ ಘೋಷಿ​ಸ​ಲಾ​ಗಿ​ದೆ.

ರಸ್ತೆ ಮಧ್ಯೆ ಮಗುಚಿದ ಲಾರಿ:

ಕೊಡ​ಗಿ​ನಲ್ಲಿ ಭಾರೀ ಮಳೆ​ಯಾ​ಗು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಕಂಟೈ​ನರ್‌ ಲಾರಿ​ಯೊಂದು ಚಾಲ​ಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡ​ಲಾಗಿ ಉರು​ಳಿದ ಪರಿ​ಣಾ​ಮ ಮಡಿಕೇರಿ-ಕುಶಾಲನಗರ ಹೆದ್ದಾರಿಯ ಸಿಂಕೋನ ಬಳಿ ಕೆಲ​ಕಾಲ ವಾಹನ ಸಂಚಾರ ಅಸ್ತ​ವ್ಯ​ಸ್ತ​ಗೊಂಡಿ​ತ್ತು. ಒಂದು ಗಂಟೆಗಳ ಕಾಲ ರಸ್ತೆ ಬಂದ್‌ ಆಗಿದ್ದರಿಂದ ಕಿಲೋ​ಮೀ​ಟ​ರ್‌​ಗ​ಟ್ಟಲೆ ವಾಹ​ನ​ಗಳು ಸಾಲು ನಿಂತಿ​ದ್ದ​ವು.

635 ಹೆಕ್ಟೇರ್‌ ಬೆಳೆ ಹಾನಿ: ಅಶೋಕ್‌

ಪೂರ್ವ ಮುಂಗಾರು ಮಳೆಯಿಂದ ರಾಜ್ಯದಲ್ಲಿ 23 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಈವರೆಗೆ ರಾಜ್ಯದಲ್ಲಿ 204 ಹೆಕ್ಟೇರ್‌ ಕೃಷಿ ಹಾಗೂ 431 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಬೆಳೆ ಹಾನಿಗೆ ಶೀಘ್ರ ಪರಿಹಾರ ವಿತರಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಮಾಹಿತಿ ನೀಡಿದ್ದಾರೆ. ಅವರು ಮಳೆ ಅನಾಹುತದ ಬಗ್ಗೆ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು.

Related posts

ಈ ಭಾರಿಯೂ ಬಹಳ ದೊಡ್ಡ ಮಟ್ಟದಲ್ಲಿ ಶಿರಹಟ್ಟಿ ವಿಧಾಸಭಾ ಕ್ಷೇತ್ರದ 2023 ರ ಚುನಾವಣೆಗೆ ಟಿಕೆಟ್‌ ಫೈಟ್‌ ಬಲು ಜೋರು

satyadarshana

ಬದ್ಧವೈರಿ ಪಾಕಿಸ್ತಾನ ಮಣಿಸಿದ ಟೀಂ ಇಂಡಿಯಾ, ಪಾಂಡ್ಯ ಸಿಕ್ಸರ್‌ಗೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು!.

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.09.04.2023

satyadarshana

Leave a Comment