ಸತ್ಯದರ್ಶನ
ಗಜೇಂದ್ರಗಡ.09.11.2021ರಂದು ಹಾಲಕೆರೆ ಗ್ರಾಮದಲ್ಲಿ ಪರಮಪೂಜ್ಯಶ್ರೀ ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳ ಗುರುವಂದನೆ ಹಾಗೂ ಪೂಜ್ಯಶ್ರೀ ಮುಪ್ಪಿನ ಬಸವಲಿಂಗದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಹಾಗೂ ಲಕ್ಷದೀಪೋತ್ಸವ ಸಮಾರಂಭಕ್ಕೆ ಆಗಮಿಸಿದ ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಗಜೇಂದ್ರಗಡ ತಾಲ್ಲೂಕ ಜೆಡಿಎಸ್ ಅಧ್ಯಕ್ಷರಾದ ಎಂ .ವಾಯ್.ಮುಧೋಳ (ಸಾಗರ್) ಅವರು ಸನ್ಮಾನಿಸಿ ಸ್ವಾಗತಿಸಿದರು.ಪರಮಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳು . ಹಾಗೂ ಚನ್ನಬಸವ ಮಹಾಸ್ವಾಮಿಗಳು . ಅದೇ ರೀತಿ ಶ್ರೀ ಕುಮಾರೇಶ್ವರ ಕಾರ್ಯಕ್ರಮದಲ್ಲಿ ಮೂರು ಶ್ರೀಗಳ ಜೈಕಾರ ಘೋಷಣೆ ಮುಗಿಲುಮುಟ್ಟಿತು .

ಕಾರ್ಯಕ್ರಮದಲ್ಲಿ ಪೂಜಾಶ್ರೀ ಕೊಟ್ಟೂರು ದೇಶಿಕೇಂದ್ರ ಮಠದ ಶ್ರೀಗಳು , ಪರಮಪೂಜ್ಯ ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳು . ಅಂಕಲಗಿ ಮಠದ ಶ್ರೀಗಳು . ಹಾಳಕೇರಿ ಮುತ್ತಿನ ಬಸವಲಿಂಗ ಮಹಾಸ್ವಾಮಿಗಳು . ಇನ್ನು ಹಲವಾರು ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
