Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಶಾಸಕ ಜಿ.ಎಸ್. ಪಾಟೀಲ ವಿವಾದಿತ ಹೇಳಿಕೆ ಖಂಡನೀಯ : ಮಕ್ತುಂಸಾಬ ಮುಧೋಳ

*ಶಾಸಕ ಜಿ.ಎಸ್. ಪಾಟೀಲ ವಿವಾದಿತ ಹೇಳಿಕೆ ಖಂಡನೀಯ : ಮಕ್ತುಂಸಾಬ ಮುಧೋಳ* 

ಗಜೇಂದ್ರಗಡ  :ಇತ್ತಿಚಿಗೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ವಿಚಾರವೂ ದಿನದಿಂದ ದಿನಕ್ಕೆ ತಾರಕ್ಕೆ ಏರುತ್ತಿದೆ.

ಈ ಹಿನ್ನಲೆಯಲ್ಲಿ ನಿನ್ನೆ ಗಜೇಂದ್ರಗಡ ಪಟ್ಟಣದಲ್ಲಿ ಅಹಿಂದ ನಾಯಕರು ಹೋರಾಟ ಹಮ್ಮಿಕೊಂಡಿದ್ದು, ಬಹಿರಂಗ ಸಭೆಯಲ್ಲಿ ರೋಣ ಶಾಸಕ ಜಿ.ಎಸ್.ಪಾಟೀಲರು ಸಿಎಂ ರಾಜಿನಾಮೆಗೆ ಪಟ್ಟು ಹಿಡಿದರೆ ಪ್ರಧಾನಿ ನರೇಂದ್ರ ಮೋದಿ ಮನೆಗೆ ಬಾಂಗ್ಲಾದೇಶದಂತೆ ಮುತ್ತಿಗೆ ಹಾಕಬೇಕಾಗುತ್ತದೆ ಎನ್ನುವು ಮಾತುಗಳು ಈಗ ವಿಪಕ್ಷಗಳಿಗೆ ಅದು ಅಸ್ತ್ರವಾಗಿದೆ‌.

ಈ ಕುರಿತಂತೆ ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಮಕ್ತುಂಸಾಬ ಮುಧೋಳ ಅವರು ತಮ್ಮ ಕಛೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ

ರೋಣ ಮತಕ್ಷೇತ್ರವೂ ಶಾಂತಿ ಸೌಹಾರ್ದ ಕ್ಷೇತ್ರವಾಗಿದೆ. ಆದರೆ ಇಂತಹ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಜಿ.ಎಸ್.ಪಾಟೀಲರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಒಂದು ರೀತಿ ದೇಶದಲ್ಲಿ ಅಶಾಂತಿ ವಾತಾವರಣ ನೀಡುವಂತೆ ಹೇಳಿಕೆಯು ಖಂಡನೀಯ, ಅನಂತರ ಕಾಂಗ್ರೆಸ್ ಪಕ್ಷ ಹಗರಣಗಳ ಗೂಡು ಆಗಿದೆ. ಅಂತಹ ಗೂಡಿನಲ್ಲಿನ ಶಾಸಕರು ಮತ್ತೊಬ್ಬರ ಬಗ್ಗೆ ಇಂತಹ ಶಬ್ದಗಳನ್ನು ಬಳಸಿರುವುದು ನೋಡಿದರೆ ಮುಜುಗರ ಎನ್ನಿಸುತ್ತದೆ.

ಗದಗ ಜಿಲ್ಲೆಯ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಅಧ್ಯಕ್ಷರು ಇವರ ಈ ಹೇಳಿಕೆಯು ರಾಜ್ಯದಲ್ಲಿ ದಂಗೆಯನ್ನು ಎಬ್ಬಿಸುವ ಹುನ್ನಾರವಾಗಿದೆ ಇದನ್ನು ಈ ಕೂಡಲೇ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುತ್ತದೆ ಎಂದರು.

Related posts

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಳ್ಳಾರಿ

satyadarshana

ಎನ್ ಸಿಬಿ ದಾಳಿ, ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಮಂದಿ ವಶಕ್ಕೆ

satyadarshana

ಮರೆಯಲಾಗದ ಮಾಣಿಕ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರವರು…

satyadarshana

Leave a Comment