Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ನರೇಗಲ್ಲಗೆ ಜಿಲ್ಲಾಧಿಕಾರಿ ಭೇಟಿ 

 

ನರೇಗಲ್ಲ : ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಮಂಗಳವಾರ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಭೇಟಿ ನೀಡಿದರು‌.

ಪ.ಪಂ ಸಭಾಭವನದಲ್ಲಿ ಡೋರ್ ಕ್ಲೋಜ್ ಗೌಪ್ಯ ಸಭೆ ನಡೆಸುವ ಉದ್ದೇಶದಿಂದ ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಕಳುಹಿಸಿದ ಘಟನೆ ಜರುಗಿದೆ. ಸಭೆ ಮುಗಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತೇನೆ. ದಯವಿಟ್ಟು ಮಾಧ್ಯಮ ಪ್ರತಿನಿಧಿಗಳು ಹೊರಗೆ ಹೋಗಿ ಎಂದು ಮನವಿ ಮಾಡಿಕೊಂಡಿದ್ದರೆ. ಆದರೆ, ಸಭೆ ಮುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕಾರ್ಯಾಲಯದಿಂದ ಹೊರಗೆ ಹೋಗಿದ್ದಾರೆ.

ನಂತರ ಪಟ್ಟಣದ ಘಟತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿ ನೆಡೆದ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಅಲ್ಲದೇ, ಪಟ್ಟಣದ ಐತಿಹಾಸಿಕ ಹಿರೇಕೆರೆಗೆ ಭೇಟಿ ನೀಡಿದರು. ಈ ವೇಳೆ ನೂತನವಾಗಿ ಮುಖ್ಯಾಧಿಕಾರಿಯಾಗಿ ನೇಮಕರಾದ ಶಿವಾನಂದ ಅಜ್ಜಣ್ಣನವರ ಅವರಿಗೆ ಈ ಐತಿಹಾಸಿಕ ಹಿರೇಕೆರೆಯನ್ನು ಸ್ವಚ್ಛಗೊಳಿಸುವಂತೆ ತಿಳಿಸಿದರು.

ಪ.ಪಂ ಸದಸ್ಯ ದಾವುದಲಿ ಕುದರಿ, ರಾಚಯ್ಯ ಮಾಲಗಿತ್ತಿಮಠ, ಗಜೇಂದ್ರಗಡ ತಹಶೀಲ್ದಾರ ರಜನಿಕಾಂತ್ ಕೆಂಗೇರಿ, ಕಂದಾಯ ನಿರೀಕ್ಷಕೆ ಗೌರಮ್ಮ ಆದಪ್ಪನವರ, ಶರಣಪ್ಪ ನಾವಣಿ, ಎಂ. ಮರಿಗೌಡ್ರ, ವೀರಣ್ಣ ಅಡಗತ್ತಿ, ಬಸವರಾಜ ಗುಳೆರ, ಸಿದ್ದು ಹುಣಸಿಮರದ, ಗ್ರಾಮ ಲೇಕ್ಕಾಧಿಕಾರಿ ಕೆ.ಎನ್. ಪಾಟೀಲ, ಶಂಕ್ರಪ್ಪ ದೊಡ್ಡಣ್ಣನವರ ಸೇರಿದಂತೆ ಇತರರಿದ್ದರು.‌

Related posts

ಪೋಲಿಸ ಇಲಾಖೆ ದೂರುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ : ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಗೋಪಾಲ ಕೋಣಿಮನಿ

satyadarshana

ಮಾಸಿಕ 2,000 ರೂ. ಒದಗಿಸುವ ಗೃಹಲಕ್ಷ್ಮೀ ಯೋಜನೆ ನೋಂದಣಿ ಆರಂಭ.ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್.

satyadarshana

: ಮಾರಣಬಸರಿ ಟು ಜಕ್ಕಲಿ ರಸ್ತೆ ಎರಡು ವರ್ಷವಾದರೂ ಡಾಂಬರ ಕಾಣದ ರಸ್ತೆ

satyadarshana

Leave a Comment