ಗಜೇಂದ್ರಗಡ: 28. ಸಪ್ಟಂಬರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ದಾದಾ ಸಾಹೇಬ ಡಾ . ಎನ್ ಮೂರ್ತಿ ಗದಗ ಜಿಲ್ಲಾ ಸಮಿತಿವತಿಯಿಂದ ಜಿಲ್ಲಾ ಅಧ್ಯಕ್ಷರಾದ ಡಿ.ಜಿ. ಕಟ್ಟಿಮನಿ ನೇತೃತ್ವದಲ್ಲಿ 27-09-2022 ರಂದು ಗಜೇಂದ್ರಗಡ ಪ್ರವಾಸಿ ಮಂದಿರದಲ್ಲಿ ಗಜೇಂದ್ರಗಡ ತಾಲೂಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು .
ಗಜೇಂದ್ರಗಡ ತಾಲೂಕ ಅಧ್ಯಕ್ಷರಾಗಿ ಷಣ್ಮುಖ ಮಾದರ ,
ತಾಲೂಕ ಉಪಾಧ್ಯಕ್ಷರಾಗಿಯಲ್ಲಪ್ಪ ಮಾದರ ,
ಸಂಘಟನಾ ಕಾರ್ಯದರ್ಶಿಯಾಗಿ ದುರಗೇಶ ಎಂ . ಹಿರೇಮನಿ ,
ಪ್ರಧಾನ ಕಾರ್ಯದರ್ಶಿಯಾಗಿ ಯಮನೂರ ಎಲ್ . ಅಬ್ಬಿಗೇರಿ ,
ಖಜಾಂಚಿಯಾಗಿ ರೋಣಪ್ಪ ಮಾದರ ಅವರನ್ನು ಆಯ್ಕೆ ಮಾಡಲಾಯಿತು .
ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ.ಜಿ. ಕಟ್ಟಿಮನಿಯವರ ಆದೇಶದ ಮೇರೆಗೆ ಸಭೆ ಮಾಡಲಾಯಿತು . ಈ ಸಭೆಯಲ್ಲಿ ಸಮಾಜದ ಮುಖಂಡರಾದ ದುರಗಪ್ಪ ಸಂಧಿಮನಿ , ಉಮೇಶ ಹೊಳೆಆಲೂರ ಗದಗ ಜಿಲ್ಲಾ ಉಪಾಧ್ಯಕ್ಷರು , ಖಾಸಿಮ ಸುಂಕದ ಅಲ್ಪಸಂಖ್ಯಾತರ ಗದಗ ಜಿಲ್ಲಾ ಘಟಕದ ಅಧ್ಯಕ್ಷರು , ಹನಮಂತ ನಾಗೇಂದ್ರಗಡ ಮಲ್ಲಪ್ಪ ದಿಂಡೂರ , ಹನಮಂತ ಪೂಜಾರ , ಹನಮಂತ ಹಿರೇಕೊಪ್ಪ , ಮುತ್ತಪ್ಪ ಮಾದರ , ಮಂಜು ಕೊಡಗನೂರ , ಶರಣು ಕರಮುಡಿ , ಹನಮಂತ ಅಮರಗೊಳ , ಮುತ್ತು ರತ್ನಾಕರ , ಚಂದ್ರು ಮಾದರ , ಸಿದಪ್ಪ ಚಿಕ್ಕಅಳಗುಂಡಿ , ಎಫ್.ಡಿ. ಮಾದರ , ಈ ಸಭೆಯ ಅಧ್ಯಕ್ಷತೆಯನ್ನು ಯಮನೂರಪ್ಪ ಹರಿಜನ ವಹಿಸಿದ್ದರು ಇನ್ನು ಅನೇಕ ದಲಿತ ಮುಖಂಡರು ಭಾಗವಹಿಸಿದರು .
