Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಇದೆಂಥಾ ಹೇಯ ಕೃತ್ಯ .. ? ಕುರಿ ಕದಿಯಲು ಬಂದು ಮಾಲೀಕನನ್ನೇ ಕೊಂದ ಕಳ್ಳರು !

ಹಾವೇರಿ :   ಕುರಿ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳರು ಕುರಿ ಮಾಲೀಕನನ್ನೇ ಕೊಂದಿರುವ ಭಯಾನಕ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ . ವೆಂಕಟೇಶ್ ರಂಗಪ್ಪ ಮುತ್ತೂರ ( 50 ) ಕೊಲೆಯಾದ ದುರ್ದೈವಿ . ನಿನ್ನೆ ಸಂಜೆ ಹಾವೇರಿಯಲ್ಲಿ ಮಳೆ ಸುರಿದಿತ್ತು . ಮಳೆ ಹಿನ್ನೆಲೆಯಲ್ಲಿ ಕುರಿಯನ್ನ ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು ಅರಿತ ಕಳ್ಳರು , ಪಾರಂಗೆ ನುಗ್ಗಿದ್ದಾರೆ . ಈ ವೇಳೆ ಕಳ್ಳರನ್ನ ತಡೆಯಲು ಮಾಲೀಕ ವೆಂಕಟೇಶ್ ಬಂದಿದ್ದಾರೆ .

ಆಗ ವೆಂಕಟೇಶ್ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ . ಅಲ್ಲದೇ ಬರೋಬ್ಬರಿ 40 ಕಾರಿಗಳನ್ನ ಕದ್ದುಕೊಂಡು ಎಸ್ಕೆಪ್ ಆಗಿದ್ದಾರೆ . ಅಂದ್ದಾಗೆ ಈ ರೀತಿಯ ಕುರಿ ಕಳ್ಳತನ ರಾಣೇಬೆನ್ನೂರು ತಾಲೂಕಿನಲ್ಲಿ ಇದು ಆರನೇ ಕೇಸ್ ಆಗಿದೆ . ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

Related posts

ಏ.14 ರಂದು ಡಾ. ಅಂಬೇಡ್ಕರ್‌ರವರ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ಜನ್ಮ ದಿನಾಚರಣೆ

satyadarshana

ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ.

satyadarshana

ಬಿ.ಬಿ.ಚಿಮ್ಮನಕಟ್ಟಿ ಅವರು ಆಡಿದ ಮಾತುಗಳಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆ ಗೊಂದಲದ ಗೂಡಾದ ಘಟನೆ

satyadarshana

Leave a Comment