ಸತ್ಯದರ್ಶನ
ಬೆಂಗಳೂರು.:ಕರೋನಾ ಮಹಾಮಾರಿಯು ತನ್ನ ಪ್ರಭೇದವಾದ ಓಮಿಕ್ರಾನ್ ಮೂಲಕ ಮತ್ತೆ ಮೂರನೇ ಅಲೆಯಾಗಿ ಅಪ್ಪಳಿಸಿ ದೇಶ ಹಾಗೂ ರಾಜ್ಯವನ್ನು ಭಯದ ವಾತವರಣದಲ್ಲಿ ಮುಳುಗಿಸುತ್ತಿದೆ ಹೀಗಾಗಿ ಬಹುತೇಕರು ಇನ್ನೂ ಕರೋನಾ ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಹಾಕಿಸಿಕೊಳ್ಳಬೇಕೆಂದು ಜನ ಸೇವಾ ನಿರತವಾದ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ಟ್ರಸ್ಟ್ ವತಿಯಿಂದ ಮೊದಲನೇಯ ಲಸಿಕೆಯನ್ನು ಹಾಕಿಸುವ ಪ್ರಕ್ರಿಯೆ ಜರುಗಿತು.
ಬೆಂಗಳೂರಿನ ರಾಮನಗರದ ಬಿಡದಿಯಲ್ಲಿ ವೀಣಾ ಕೆ ಎಸ್ ನೇತೃತ್ವ ವಹಿಸಿಕೊಂಡು ಬಿಡದಿ ಸರ್ಕಾರಿ ಆಸ್ಪತ್ರೆಗೆಯಲ್ಲಿ ವಾರ್ಡಿನ ಹಾಗೂ ಬೇರೆ ರಾಜ್ಯದಿಂದ ಬಂದಿರುವಂತಹ ಕಾರ್ಮಿಕರನ್ನು ಕರೆತಂದು ವ್ಯಾಕ್ಸಿನ್ ಹಾಕಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು, ಕಾರ್ಮಿಕರು, ಮಹಿಳಾ ಕಾರ್ಯಕರ್ತೆಯರು, ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಾಕ್ಸ್
ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕರೋನಾ ವಕ್ಕರಿಸುವ ಭೀತಿ ಇದೆ ಎಲ್ಲರೂ ತಪ್ಪದೇ ಮೊದಲ ಹಾಗೂ ಎರಡನೇ ಡೋಸ್ ತಪ್ಪದೇ ಹಾಕಿಸಿಕೊಳ್ಳಿರಿ.
– ಡಾ. ರಾಘವೇಂದ್ರ
ಆರೋಗ್ಯ ಸಲಹೆಗಾರರು ಸಮುದಾಯ ಆರೋಗ್ಯ ಕೇಂದ್ರ ಬಿಡದಿ
