Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ನಿರಂತರ ಪರಿಶ್ರಮದಿಂದ ಸಾಧನೆ ಮಾಡಿರಿ

 

ಗಜೇಂದ್ರಗಡ:

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯ ಹಾಗೂ ಸಮೂಹ ಮಾಧ್ಯಮದಲ್ಲಿ ದಶಕಗಳ ಸೇವೆ ಸಲ್ಲಿಸಿರುವುದನ್ನುಪರಿಗಣಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ ಕೊಡ ಮಾಡಿದರಾಜೂರಿನ ಡಾ. ಕಳಕೇಶ.ಎಲ್ . ಉಕ್ಕಿಸಲ ಮತ್ತು ಡಾ.ಜಯದೇವ್ .ಅ.ಗಂಜಿಹಾಳ. ಇವರನ್ನು ರಾಜೂರಿನ ಕಿರಿಯ ಪ್ರಾಥಮಿಕ ಶಾಲೆಯ ಗುರು ವೃಂದ ಹಾಗೂ ಎಸ್ ಡಿ ಎಂ ಸಿ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಡಾ. ಕಳಕೇಶ ಮಾತನಾಡಿ ಜೀವನದಲ್ಲಿ ಕಷ್ಟವನ್ನು ಸಹಿಸುವವನಿಂದ ಮಾತ್ರ ಏನನ್ನಾದರೂ ನಿರ್ವಹಿಸಲು ಸಾಧ್ಯವಿದೆ. ಈ ದಿಶೆಯಲ್ಲಿ ನಾವೆಲ್ಲರೂ ನಮ್ಮ ಪಾಲಕರು ,ಗುರುಗಳು ಹೇಳಿರುವ ಸೂಕ್ತ ಮಾರ್ಗ ದರ್ಶನದಿಂದ ನಿರಂತರವಾಗಿ ಶ್ರಮಿಸಿದಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ. ಎಸ್. ದೊಡ್ಡಮನಿ ಪ್ರಧಾನ

ಗುರುಗಳು ವಹಿಸಿದ್ದರು ,

ಮುಖ್ಯ ಅತಿಥಿಗಳಾಗಿ ಶರಣಪ್ಪ ರಾಥೋಡ್, ಎಸ್‌.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರಾದ ಡಾ. ರಂಜಾನ್ ಮುಜಾವರ್ ,ರುದ್ರಪ್ಪ ಜಾಧವ್

ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶ್ರೀಮತಿ ಎನ್ ಆರ್ ಕರಮುಡಿ . ಶ್ರೀ. ಎಸ್ ಡಿ ಬಾದನಟ್ಟಿ.

ಎಂ. ಯು. ಗೋಡೆಕಾರ್ CRP ರಾಜೂರ

ಇಸ್ಮಾಯಿಲ್ ಸಾಬ್ ಯಲಿಗಾರ,

ತಾವರೆಪ್ಪ ರಾಥೋಡ್,

ಹನುಮಂತಪ್ಪ ಗಂಗಣ್ಣವರ,

ಎಸ್ ಡಿ ಬಂಕದ್,

ಎಲ್ ಉಮಚಗಿ ,

ಜಡಿಮಠ,

ಶ್ರೀ. ಮತಿ. ಮಂಜುಳಾ

ಶ್ರೀ. ಮತಿ ಶಂಕ್ರಮ್ಮ

ಶ್ರೀ. ಮತಿ ಕವಿತಾ ಕಾಡಿಗಿ ಸರ್ ಮತ್ತು ಎಸ್ ಬಿ ಉಮಚಗಿ ಸೇರಿದಂತೆ ಊರಿನ ಗುರುಹಿರಿಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು

ಕೆ .ಐ ವಸ್ತದ ನಿರೂಪಿಸಿದರು

ಅಶೋಕ್. ಹೊಸಮನಿ ಕೊನೆಯಲ್ಲಿ ವಂದಿಸಿದರು.

Related posts

ಆರ್‌ಬಿಐ ನಿರ್ಮಾಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪಾತ್ರ ದೊಡ್ಡದು..

satyadarshana

ರೋಣ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ

satyadarshana

ಬೆಳೆ ನಷ್ಟದಿಂದ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ..

satyadarshana

Leave a Comment