Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಕಾರಟಗಿ: ಭೂದಾಖಲೆಗಳ ಗಣಕೀಕರಣಕ್ಕೆ ಸಚಿವರಿಂದ ಚಾಲನೆ

ಕೊಪ್ಪಳ: ಫೆಬ್ರವರಿ 17: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಫೆ.17ರಂದು ಕಾರಟಗಿಯ ತಾಲೂಕಾಡಳಿತ ಸೌಧದಲ್ಲಿ ಭೂದಾಖಲೆಗಳ ಗಣೀಕರಣಕ್ಕೆ ಚಾಲನೆ ನೀಡಿದರು.

ಸರ್ಕಾರಿ ದಾಖಲೆಗಳು ಗಣಕೀಕರಣವಾಗುವುದು ಅತೀ ಅವಶ್ಯವಿದೆ. ಇದರಿಂದಾಗಿ ಜನರಿಗೆ ಯಾವುದೇ ಸೇವೆಗಳು ವೇಗವಾಗಿ ಸಿಗಲಿವೆ. ಈ ದಿಶೆಯಲ್ಲಿ ಯೋಚಿಸಿ ರಾಜ್ಯ ಸರ್ಕಾರವು ಸರ್ಕಾರಿ ದಾಖಲೆಗಳ ಗಣೀಕರಣಕ್ಕೆ ಒತ್ತು ನೀಡಿದೆ. ಈ ಪ್ರಕ್ರಿಯೆಯು ವೇಗವಾಗಿ ನಡೆಯುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಇದೆ ವೇಳೆ ಸಚಿವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕಾರಟಗಿ ತಹಸೀಲ್ದಾರರಾದ ಕುಮಾರಸ್ವಾಮಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಿö್ಮದೇವಿ ಸೇರಿದಂತೆ ಇನ್ನೀತರರು ಇದ್ದರು.

 

Related posts

ವಿದ್ಯಾರ್ಥಿಗಳ ಗೊಳಿಗೆ ಶಾಶ್ವತ ಪರಿಹಾರ ಸಿಗಲಿ.ಸಾರಿಗೆ ಇಲಾಖೆ ಮೂಗಿಗೆ ತುಪ್ಪ ಸವರದಿರಲಿ.

satyadarshana

ಜ್ಯೇಷ್ಠ” ಅಮಾವಾಸ್ಯೆ ಇಟಗಿ ಶ್ರೀ ನಾಗಚೌಡೇಶ್ವರಿ ಅಮ್ಮನವರ 36ನೇ ವಿಶೇಷ ಪೂಜೆಗೆ ಆಹ್ವಾನ

satyadarshana

ಇಂಜಿನಿಯರ್ಸ ಡೇ ಕೊಪ್ಪಳ

satyadarshana

Leave a Comment