Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಫೆ.14 ರಿಂದ ಯಲಬುರ್ಗಾ ತಾಲೂಕಿನಲ್ಲಿ ವಾರ್ತಾ ಇಲಾಖೆಯಿಂದ ಬೀದಿ ನಾಟಕ ಕಾರ್ಯಕ್ರಮಗಳ ಪ್ರದರ್ಶನ

ಕೊಪ್ಪಳ :ಫೆಬ್ರವರಿ 13 : ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ (ರಿ) ಕಲಾತಂಡದ ಮೂಲಕ ಫೆ.14 ರಿಂದ ಫೆ.23 ರವರೆಗೆ ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ನಡೆಯಲಿವೆ.

ಫೆ.14 ರಂದು ಬೆಳಿಗ್ಗೆ ಕಲ್ಲೂರು ಹಾಗೂ ಸಂಜೆ ಸಂಗನಾಳದಲ್ಲಿ, ಫೆ.15 ರಂದು ಬೆಳಿಗ್ಗೆ ಹೊಸೂರು ಹಾಗೂ ಸಂಜೆ ಹಿರೇಅರಳಿಹಳ್ಳಿಯಲ್ಲಿ, ಫೆ.16 ರಂದು ಬೆಳಿಗ್ಗೆ ಗುನ್ನಾಳ ಹಾಗೂ ಸಂಜೆ ತಾಳಕೇರಿಯಲ್ಲಿ, ಫೆ.17 ರಂದು ಮಾಟಲದಿನ್ನಿ ಹಾಗೂ ಸಂಜೆ ಕರಮುಡಿಯಲ್ಲಿ, ಫೆ.18 ರಂದು ತೊಂಡಿಹಾಳ ಹಾಗೂ ಸಂಜೆ ಬಳೂಟಗಿಯಲ್ಲಿ, ಫೆ.19 ರಂದು ಬೆಳಿಗ್ಗೆ ಹೊಸಳ್ಳಿ ಹಾಗೂ ಸಂಜೆ ಬಂಡಿಯಲ್ಲಿ, ಫೆ.20 ರಂದು ಬೆಳಿಗ್ಗೆ ಬಸಾಪೂರ ಹಾಗೂ ಸಂಜೆ ಸಂಕನೂರನಲ್ಲಿ, ಫೆ.21 ರಂದು ಬೆಳಿಗ್ಗೆ ಶಿರಗುಂಪಿ ಹಾಗೂ ಸಂಜೆ ಹಿರೇಮ್ಯಾಗೇರಿಯಲ್ಲಿ, ಫೆ.22 ರಂದು ಬೆಳಿಗ್ಗೆ ನಿಟ್ಟಾಲಿ ಹಾಗೂ ಸಂಜೆ ಮಸಬಹಂಚಿನಾಳದಲ್ಲಿ, ಫೆ.23 ರಂದು ಬೆಳಿಗ್ಗೆ ನಿಲೋಗಲ್ ಹಾಗೂ ಸಂಜೆ ಹಿರೇವಂಕಲಕುAಟಾ ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ಜರುಗಲಿದೆ.

ಕಲಾವಿದರು ಆಯಾ ಗ್ರಾಮದ ಜನ ಸಂದಣಿ ಸ್ಥಳದಲ್ಲಿ ಸರ್ಕಾರದ ಬೀದಿ ನಾಟಕ ಕಾರ್ಯಕ್ರಮಗಳ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚುರಪಡಿಸುವರು. ಆಯಾ ಗ್ರಾಮಸ್ಥರು ಬೀದಿ ನಾಟಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬೆಲೆಗೆ ಬಿದ್ದ ಪರವಾನಿಗೆ ಭೂಮಾಪಕ

satyadarshana

ಜಿಪಂ ಸಿಇಓ ಸೂಚನೆ: ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಬೇತಿ

satyadarshana

ಗಜೇಂದ್ರಗಡದಲ್ಲಿ ಸಂವಿಧಾನ ಜಾಗೃತಿ ಅಭಿಯಾನ ಸಾಮಾಜಿಕ ಬದಲಾವಣೆಗಳ ಹಿಂದೆ ಸಂವಿಧಾನದ ಪಾತ್ರ ಮಹತ್ವದ್ದು

satyadarshana

Leave a Comment