ಗದಗ: ಬಿಂಕದಕಟ್ಟಿ ಮೃಗಾಲಯಕ್ಕೆ ಎರಡು ಸಿಂಹ ಆಗಮಿಸಲಿವೆ..
ನವದೆಹಲಿಯ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗದಗ ಮೃಗಾಲಯದಿಂದ ಕಪಿಲ( ಗಂಡು) ಮತ್ತು ಕಸ್ತೂರಿ ( ಹೆಣ್ಣು) ಎರಡು ತೋಳಗಳನ್ನು “ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಇಂಧೋರ ಮಧ್ಯಪ್ರದೇಶಗೆ ಹಸ್ತಾಂತರಿಸಿ, ಇಂದೋರ ಮೃಗಾಲಯದಿಂದ ಶಿವ ( ಗಂಡು) ಮತ್ತು ಗಂಗಾ ( ಹೆಣ್ಣು) ಎಂಬ ಹೆಸರಿನ ಎರಡು ಸಿಂಹಗಳನ್ನು ಪಡೆಯಲು ಅನುಮತಿ ನೀಡಿದೆ.
ಈ ಸಿಂಹಗಳು ಡಿಸೆಂಬರ್ 8 ರಂದು ಬೆಳಿಗ್ಗೆ 10 ಗಂಟೆಗೆ ಗದಗ ಮೃಗಾಲಯಕ್ಕೆ ಆಗಮಿಸುತ್ತಿದ್ದು, ಗದಗ ಶಾಸಕ ಎಚ್.ಕೆ.ಪಾಟೀಲ ಸ್ವಾಗತಿಸುವರು. ನೂತನ ನರಿ ಪ್ರಾಣಿಮನೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಆಯೋಜಿಸಲಾಗಿದೆ ಎಂದು ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
