ಸುದ್ದಿಮೂಲ ಸತ್ಯದರ್ಶನ
ಮುಂಡರಗಿ: ರೈತನಿಂದ ಲಂಚ ಪಡೆಯುವಾಗ ಎಸಿಬಿ ದಾಳಿ ಅಧಿಕಾರಿಗಳು ದಾಳಿ ಮಾಡಿ ಕಂದಾಯ ಇಲಾಖೆಯ ಬೆರಳಚ್ಚುಗಾರನನ್ನು ವಶಕ್ಕೆ ಪಡೆದ ಘಟನೆ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದಿದೆ.
ಕಂದಾಯ ಇಲಾಖೆಯ ಬೆರಳಚ್ಚುಗಾರ ಎಂ.ಐ.ಉಪ್ಪಾರೆಡ್ಡಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ಆರ್ ಟಿಸಿಯಲ್ಲಿ ಹೆಸರು ಕಡಿಮೆ ಮಾಡಲು 11 ಸಾವಿರ ರೂಗಳ ಲಂಚದ ಬೇಡಿಕೆ ಇಟ್ಟು ಅದರಲ್ಲಿ 5 ಸಾವಿರ ರೂಪಾಯಿಗಳು ಮುಂಗಡ ಪಡೆದಿದ್ದ ಉಪ್ಪಾರೆಡ್ಡಿ, ಇಂದು ಉಳಿದ 6 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಗದಗ ಎಸಿಬಿ ಡಿವ್ಯೆಎಸ್ಪಿ ಎಂ.ಐ.ಮಲ್ಲಾಪೂರ. ಸಿಪಿಐ ಆರ್.ಎಫ್.ದೇಸಾಯಿ ಮತ್ತು ಸಿಬ್ಬಂದಿ ನೇತ್ರತ್ವದಲ್ಲಿ ದಾಳಿ ಮಾಡಿದ್ದು, ಸದ್ಯ ತನಿಖೆ ಮುಂದುವರಿದಿದೆ.
