Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಅಹೋರಾತ್ರಿ ಧರಣಿಗೆ ಎಐಸಿಸಿ ಮೆಚ್ಚುಗೆ… ಡಿಕೆಶಿ ಜಾಣತನದ ಹೆಜ್ಜೆಗೆ ಕಾಂಗ್ರೆಸ್ ಹೈಕಮಾಂಡ್ ಶಹಬ್ಬಾಸ್…

ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ಹೈಕಮಾಂಡ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜಾಣತನದ ನಡೆದ ಎಐಸಿಸಿ ಶಹಬ್ಬಾಸ್ ಎಂದಿದೆ.

ವಿಧಾನ ಮಂಡಲದ ಅಧಿವೇಶನ ಕಾಂಗ್ರೆಸ್ ನ ಅಹೋರಾತ್ರಿ ಧರಣಿಯಿಂದಾಗಿ ರಾಷ್ಟ್ರದ ಗಮನ ಸೆಳೆದಿದೆ. ಜೊತೆಗೆ ಹಿಜಾಬ್ ವಿಚಾರದ ನಡುವೆಯೂ ಈಶ್ವರಪ್ಪ ವಿಚಾರದ ಕುರಿತು ಗಮನ ಸೆಳೆದಿದ್ದಕ್ಕೆ ರಾಜ್ಯ ಕಾಂಗ್ರೆಸ್ ಗೆ ಎಐಸಿಸಿ ಎ ಗ್ರೇಡ್ ನೀಡಿದೆ.

ಡಿಕೆ ಶಿವಕುಮಾರ್ ಅವರ ಜಾಣತನದ ನಡೆಯಿಂದಾಗಿ ಈಶ್ವರಪ್ಪ ಅವರು ರಾಷ್ಟ್ರಧ್ವಜದ ಕುರಿತು ನೀಡಿದ ಹೇಳಿಕೆಯನ್ನು ಹೈಲೈಟ್ ಮಾಡಲಾಗಿದ್ದು, ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡದಿದ್ದರೂ ಪರವಾಗಿಲ್ಲ, ಆದರೆ ಈಶ್ವರಪ್ಪ ವಿಚಾರವನ್ನು ಸಡಿಲಿಸಬೇಡಿ ಸದನದ ಒಳಗೆ ಮತ್ತು ಹೊರಗೆ ಈ ವಿಚಾರವನ್ನು ಪ್ರಸ್ತಾಪಿಸಿ ಎಂದು ಎಐಸಿಸಿ ಸೂಚನೆ ನೀಡಿದೆ.

Related posts

ಸಫಾಯಿ ಕರ್ಮಚಾರಿಗಳಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ

satyadarshana

ರಾಯರ ಹೆಸರು ಮನಸಾರೆ ಹೇಳುತ್ತ “ರಾಜಾಸೀಟ್” ಚಿತ್ರ ತಂಡಕ್ಕೆ ಶುಭ ಕೋರಿದ ನವರಸ ನಾಯಕ.

satyadarshana

ಸೂಡಿಯ ನಾಗಕುಂಡ ಮೆಟ್ಟಿಲು ಬಾವಿಯ ದತ್ತು ಸ್ವೀಕಾರದ ಒಡಂಬಡಿಕೆ

satyadarshana

Leave a Comment