ರಾಯಚೂರು: ನಗರದ ತಿಮ್ಮಾಪುರ ಪೇಟೆಯಲ್ಲಿರುವ ಕೆಇಬಿ ಇಂಟಲಿಜೆನ್ಸಿ ವಿಭಾಗದಲ್ಲ ಕಾರ್ಯನಿರ್ವಹಿಸುತ್ತಿರುವ ಪಿಎಸ್ಐ ಮನೆಗೆ ಚೋರರು ಕನ್ನ ಹಾಕಿದ್ದಾರೆ.
ನಿನ್ನೆ ತಡರಾತ್ರಿ ಪಿಎಸ್ಐ ಲಕ್ಷ್ಮೀ ಎಂಬುವವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಖದೀಮರು, ತಿಜೋರಿಯಲ್ಲಿದ್ದ 10 ಸಾವಿರ ರೂಪಾಯಿ ನಗದು ಹಾಗೂ 5 ತೊಲೆ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ನೇತಾಜಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
