ಗಜೇಂದ್ರಗಡ:
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯ ಹಾಗೂ ಸಮೂಹ ಮಾಧ್ಯಮದಲ್ಲಿ ದಶಕಗಳ ಸೇವೆ ಸಲ್ಲಿಸಿರುವುದನ್ನುಪರಿಗಣಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ ಕೊಡ ಮಾಡಿದರಾಜೂರಿನ ಡಾ. ಕಳಕೇಶ.ಎಲ್ . ಉಕ್ಕಿಸಲ ಮತ್ತು ಡಾ.ಜಯದೇವ್ .ಅ.ಗಂಜಿಹಾಳ. ಇವರನ್ನು ರಾಜೂರಿನ ಕಿರಿಯ ಪ್ರಾಥಮಿಕ ಶಾಲೆಯ ಗುರು ವೃಂದ ಹಾಗೂ ಎಸ್ ಡಿ ಎಂ ಸಿ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಡಾ. ಕಳಕೇಶ ಮಾತನಾಡಿ ಜೀವನದಲ್ಲಿ ಕಷ್ಟವನ್ನು ಸಹಿಸುವವನಿಂದ ಮಾತ್ರ ಏನನ್ನಾದರೂ ನಿರ್ವಹಿಸಲು ಸಾಧ್ಯವಿದೆ. ಈ ದಿಶೆಯಲ್ಲಿ ನಾವೆಲ್ಲರೂ ನಮ್ಮ ಪಾಲಕರು ,ಗುರುಗಳು ಹೇಳಿರುವ ಸೂಕ್ತ ಮಾರ್ಗ ದರ್ಶನದಿಂದ ನಿರಂತರವಾಗಿ ಶ್ರಮಿಸಿದಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ. ಎಸ್. ದೊಡ್ಡಮನಿ ಪ್ರಧಾನ
ಗುರುಗಳು ವಹಿಸಿದ್ದರು ,
ಮುಖ್ಯ ಅತಿಥಿಗಳಾಗಿ ಶರಣಪ್ಪ ರಾಥೋಡ್, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರಾದ ಡಾ. ರಂಜಾನ್ ಮುಜಾವರ್ ,ರುದ್ರಪ್ಪ ಜಾಧವ್
ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶ್ರೀಮತಿ ಎನ್ ಆರ್ ಕರಮುಡಿ . ಶ್ರೀ. ಎಸ್ ಡಿ ಬಾದನಟ್ಟಿ.
ಎಂ. ಯು. ಗೋಡೆಕಾರ್ CRP ರಾಜೂರ
ಇಸ್ಮಾಯಿಲ್ ಸಾಬ್ ಯಲಿಗಾರ,
ತಾವರೆಪ್ಪ ರಾಥೋಡ್,
ಹನುಮಂತಪ್ಪ ಗಂಗಣ್ಣವರ,
ಎಸ್ ಡಿ ಬಂಕದ್,
ಎಲ್ ಉಮಚಗಿ ,
ಜಡಿಮಠ,
ಶ್ರೀ. ಮತಿ. ಮಂಜುಳಾ
ಶ್ರೀ. ಮತಿ ಶಂಕ್ರಮ್ಮ
ಶ್ರೀ. ಮತಿ ಕವಿತಾ ಕಾಡಿಗಿ ಸರ್ ಮತ್ತು ಎಸ್ ಬಿ ಉಮಚಗಿ ಸೇರಿದಂತೆ ಊರಿನ ಗುರುಹಿರಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು
ಕೆ .ಐ ವಸ್ತದ ನಿರೂಪಿಸಿದರು
ಅಶೋಕ್. ಹೊಸಮನಿ ಕೊನೆಯಲ್ಲಿ ವಂದಿಸಿದರು.
