ನರೇಗಲ್: ಯೋಗ೯ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ನಿರೋಗಿಯಾಗು ವಿಶ್ವ ಯೋಗ ದಿನಾಚರಣೆ.ಯೋಗ ಮುಕ್ತ ರೋಗ ಮುಕ್ತ.
ಎಂಬಂತೆ ವಿಶ್ವಕ್ಕೆ ಯೋಗದ ಮಹತ್ವವನ್ನು ಪರಿಚಯಿಸಿಕೊಟ್ಟ ಹೆಮ್ಮೆಯ ನಮ್ಮ ಭಾರತ 9 ನೇ ವಿಶ್ವ ಯೋಗ ದಿನಾಚರಣೆಯನ್ನು ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್ನರಾದ ಜಗದೀಶ್ ಕರಡಿಯವರು ಅಧ್ಯಕ್ಷತೆಯನ್ನು ವಹಿಸಿ. ಮಾತನಾಡಿದರುಯೋಗವು ಜನರಿಗೆ ಒತ್ತಡ-ಮುಕ್ತ, ಸಮತೋಲಿತ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ, ಇದು ಇದೀಗ ನಿರ್ಣಾಯಕವಾಗಿದೆ
ಜೂನ್ 21 ಭೂಮಿಯ ಮೇಲೆ ದೀರ್ಘಾವಧಿಯ ಬೆಳಕು ಹೊಂದಿದ್ದು ಇದರ ಸಂಕೇತವಾಗಿ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯವು ವೃದ್ಧಿಸಲಿ ಎಂಬುವುದಾಗಿದೆ .ಯೋಗಿಯಾಗು ನಿರೋಗಿಯಾಗು ಆಧುನಿಕ ದಿನಮಾನದಲ್ಲಿ ಯುವ ಪೀಳಿಗೆಗಳು ತಮ್ಮ ಅಮೂಲ್ಯವಾದ ದೇವರು ಕೊಟ್ಟ ಶರೀರವನ್ನು ದುಶ್ಚಟಗಳಿಗೆ ದಾಸನಾಗಿ ಆರೋಗ್ಯ ಹಾನಿ ಮಾಡಿಕೊಳ್ಳುತ್ತಿದ್ದಾನೆ ದೇವರು ಕೊಟ್ಟ ನಿಷ್ಕಲ್ಮಶ ಹಾಗೂ ಶುದ್ಧ ದೇಹವನ್ನು ಮರಳಿ ಅದೇ ತೆರನಾಗಿ ಈ ದೇಹವನ್ನು ಯೋಗದಿಂದ ಸಮರ್ಪಿಸೋಣ ಎಂದು ಮಕ್ಕಳಿಗೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರು ಎಸ್.ಆಯ್.ದಿಂಡೂರ್ ಸ್ವಾಗತಿಸದರು.ಎಂ.ಬಿ. ಕೂಪ್ಪದ ಪುಷ್ಪಾರ್ಚನೆ ನಡೆಸಿಕೊಟ್ಟರು ಎಸ್ ವಿ.ಹಳ್ಳಿಕೇರಿ ವಂದಿಸಿದರು.ಕೆ.ಬಿ.ಗಡಾದ. ಯೋಗಭ್ಯಾಸ ನಡೆಸಿಕೊಟ್ಟವರು. ವೆಂಕನಗೌಡ.ಎ. ಎಚ್.ಬಿ.ಕಟ್ಟಿಮನಿ. ಶ್ರೀಮತಿ ಎಸ್.ಬಿ. ಹಿರೇಮಠ. ಬಿ.ಪಿ.ಕಾಗಿ. ಉಪಸ್ಥಿತರಿದ್ದರು.
