Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

*ಪೊಲೀಸ ಇಲಾಖೆಯಿಂದ ರಾಯಬಾಗ ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಂದು ಕೊರತೆ ಸಭೆ

ವರದಿ: ಮಲ್ಲು ದೊಡ್ಡಮನಿ

ರಾಯಬಾಗ:22.08.2021

ತಮ್ಮ ಸಮಸ್ಯೆಗಳ ಕುರಿತು ಎಸ್ಸಿ. ಎಸ್ಟಿ ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದು

ಇಲಾಖೆಯ ಅಧಿಕಾರಿಗಳಿಗೆ ತಮ್ಮ ಅಳಲನ್ನು ದಲಿತ ನಾಯಕರು ತೋಡಿಕೊಂಡರು.

ರವಿವಾರ.22ರಂದು ತಾ.ಪಂ ಸಭಾಂಗಣದಲ್ಲಿ ಡಿ.ವಾಯ್.ಎಸ್.ಪಿ ಎಸ್.ವಿ.ಗಿರೀಶರವರ ಅಧ್ಯಕ್ಷತೆಯಲ್ಲಿ ಎಸ್ಸಿ.ಎಸ್ಟಿ ಕುಂದು ಕೊರತೆ ಸಭೆ ನಡೆಯಿತು.

*ಚಾಲನಾ ಪರವಾನಗಿ ನೀಡುವ ಸಲುವಾಗಿ ಆರ್.ಟಿ.ಓ.ಕ್ಯಾಂಪಗೇ ಮನವಿ*

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಚಾಲನಾ ಪರವಾನಿಗೆ ನೀಡುವ ಸಲುವಾಗಿ ಒಂದು ಕ್ಯಾಂಪ ನಡೆಸುವಂತೆ ದಲಿತ ನಾಯಕ ಮಹಾವೀರ ಐಹೊಳೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

*ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ ವಾಗಿದೆ ಇದನ್ನು ತಡೆಯಲು ಕೊರಿಕೆ*

ತಾಲೂಕಿನ ರಾಯಬಾಗ,ನಂದಿಕುರಳಿ,ಬ್ಯಾಕೂಡ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಷರ್ಗಳಲ್ಲಿ ಬಾಲಕಾರ್ಮಿಕ ರನ್ನು ಕೆಲಸಕ್ಕೆ ಹಚ್ಚುತ್ತಿರುವುದನ್ನು ನಿಲ್ಲಿಸಬೇಕು ಎಂದು ಕಂಕಣವಾಡಿ ಗ್ರಾಮದ ಸಚೀನ ಸೊನಾವಣೆ ಆಗ್ರಹಿಸಿದರು.

*ವೇಶ್ಯಾವಾಟಿಕೆ ತಡೆಯಲು ಆಗ್ರಹ*

ತಾಲೂಕಿನ ಬೆಕ್ಕೇರಿ ಗ್ರಾಮದ ಲ್ಲಿ 16.17.18 ವಯಸ್ಸಿನ ಹೆಣ್ಣು ಮಕ್ಕಳನ್ನು ವೆಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿ.ಎಸ್.ಎಸ್.ಮುಖಂಡ ಪರಶುರಾಮ ಟೊನಪೆ ಆಗ್ರಹಿಸಿದರು.

*ಕಳ್ಳಭಟ್ಟಿ ಸಾರಾಯಿ ಮಾರಾಟ ನಿಷೇಧಿಸಲು ಆಗ್ರಹ*

ಮೊರಬ ಗ್ರಾಮದ ಬಸವೇಶ್ವರ ನಗರದಲ್ಲಿ ಅವ್ಯಾಹತವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಇದನ್ನು ತಕ್ಷಣವೇ ನಿಲ್ಲಿಸಿ, ಸಾರಾಯಿ ಮಾರಾಟ ಮಾಡುವವರ ಮೇಲೆ ಕ್ರಮ ಜರುಗಿಸುವಂತೆ

ಮೊರಬ ಗ್ರಾಮದ ಪ್ರಶಾಂತ ಕಾಂಬಳೆ ಆಗ್ರಹಿಸಿದರು.

*ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಸಲಹೆ*

ಪ್ರತಿ ತಿಂಗಳ ಕೊನೆಯ ಶನಿವಾರ ಮೊದಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ನಡೆಯುತ್ತಿತ್ತು,ಈಗ ಕೊವಿಡ್-19ಸೊಂಕು ನೆಪದಲ್ಲಿ ಸಭೆ ಕರೆದಿಲ್ಲ ಕೂಡಲೇ ಸಭೆ ಕರೆಯುವಂತೆ ಹಾರೂಗೇರಿ ಗ್ರಾಮದ ದಲಿತ ನಾಯಕ ಸುರೇಶ ಐಹೋಳೆ ಕೇಳಿಕೊಂಡರು.

ಸರ್ವ ಜನಾಂಗದ ಸಮಸ್ಯೆಗಳಿಗೆ ಶಿಘ್ರದಲ್ಲಿ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ

ಡಿ.ವೈ.ಎಸ್.ಪಿ.ಎಸ್.ವಿ.ಗಿರೀಶ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ

ಸಿ.ಪಿ.ಐ.ಎಚ್.ಡಿ.ಮುಲ್ಲಾ,

ದಲಿತ ನಾಯಕರಾದ ನಾಮದೇವ ಕಾಂಬಳೆ,ಜಯಪಾಲ ವಕೀಲಕರ, ಮಹಾವೀರ ಐಹೊಳೆ,ಅನೀಲ ಸಾನೆ, ಸುರೇಶ ಐಹೋಳೆ, ತ್ಯಾಗರಾಜ ಕದಂ,ಗಣೇಶ ಕಾಂಬಳೆ, ಕಿರಣ ಕಾಂಬಳೆ,ಕಾಡೇಶ ಐಹೊಳೆ

ಪರಶುರಾಮ ಟೊನಪೆ,ಸಚೀನ ಸೊನಾವಣೆ ಮುಂತಾದವರು ಉಪಸ್ಥಿತರಿದ್ದರು.

Related posts

ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ,

satyadarshana

ವೀಕೆಂಡ್‌ ಕರ್ಫ್ಯೂ ತೆರವು, ನೈಟ್ ಕರ್ಫ್ಯೂ ಮುಂದುವರಿಕೆ

satyadarshana

ಈ ಮೂಲಕ ಸದ್ಭಕ್ತ ವೃಂದ ಹಾಗು ಸಂಘ-ಸಂಸ್ಥೆಗಳಿಗೆ ತಿಳಿಸುವುದೆನೆಂದರೆ ತಾವು ಕೊಪ್ಪಳ ರೈಲು ನಿಲ್ದಾಣಕ್ಕೆ “ಶ್ರೀ ಗವಿಸಿದ್ಧೇಶ್ವರ ರೈಲು ನಿಲ್ದಾಣ”

satyadarshana

Leave a Comment