ಗಜೇಂದ್ರಗಡ :ಸತತವಾಗಿ ಪರಿಶ್ರಮ ಪಟ್ಟಾಗಲೇ ಸಾಧನೆ ಸಾಧ್ಯ .
ಸಾಧನೆ ಎನ್ನುವುದು ಸುಲಿದ ಬಾಳೆಹಣ್ಣಿನಂತಲ್ಲ .ಅತ್ಯಂತ ಕಠಿಣತೆಯಲ್ಲಿ ನಿಷ್ಠೆಯಿಂದ ನಿರಂತರ ಕಾರ್ಯ ಶೀಲತೆಯನ್ನು ಹೊಂದಿದಾಗಲೇ ಆ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಈ ದಿಶೆಯಲ್ಲಿ ಪ್ರೊ.ಬಿ. ಕೆ.ಮಾದಿ ಅವರು ಮೂರು ವಿಷಯಗಳ ಮೇಲೆ ಸ್ನಾತಕೋತ್ತರ ಪದವಿ ಪಡೆದು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾನಿಲಯದಿಂದ ಯು ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಎ ರೂಲ್ ಆಫ್ ಎಸ್ಸಿ ಎಸ್ಟಿ ಇನ್ ಪಂಚಾಯತ್ ರಾಜ್ ಅಂಡ್ ಲೋಕಲ್ ಇನ್ಸ್ಟಿಟ್ಯುಶನ್ ಎ ಕೆ ಸ್ಟಡಿ ಆಫ್ ಧಾರ್ವಾಡ್ ಡಿಸ್ಟ್ರಿಕ್ಟ್ ವಿಷಯದ ಮೇಲೆ ಎಂಫಿಲ್ ಪದವಿಯನ್ನು ಹೊಂದಿ ಜಾಗತಿಕ ಸಾಂಸ್ಕೃತಿಕ ಬದಲಾವಣೆ ಕುರಿತ ಕೃತಿ ರಚನೆ ಹಾಗೂ ಮುಕ್ತಿ ವಾಹಿನಿ ಆತ್ಮಕಲ್ಯಾಣ ಅಭಿಯಾನದ ಮೂಲಕ ಮನುಕುಲಕ್ಕೆ ಸಲ್ಲಿಸಿದ ಸೇವೆಗೆ ಡಾಕ್ಟರೇಟ್ ದೊರೆತದ್ದು ಬಹಳ ಸಂತಸದ ಸಂಗತಿ ಆಗಿದೆ ಎಂದು ಗುರುಮಾತೆ ಶ್ರೀಮತಿ ಶೀಲಾ ಮಾ ಕೋಟಗಿ ಅವರು ಹೇಳಿದರು. ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದ ನಿಮಿತ್ಯ ಓಂ ಮಾತ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಶಿಕ್ಷಕ ದಿನಾಚರಣೆ ಅಂಗವಾಗಿ ಡಾಕ್ಟರೇಟ್ ಪಡೆದಿರುವ ಬಿ.ಕೆ .ಮಾದಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು ಈ ಸಂದರ್ಭದಲ್ಲಿ ಡಾ. ಬಿ.ಕೆ ಮಾದಿಯವರ ಕುಟುಂಬ ವರ್ಗದವರು ಮುಕ್ತಿ ವಾಹಿನಿ ಆತ್ಮಕಲ್ಯಾಣ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಶ್ರೀಮತಿ ಮಂಜುಳಾ ಇಟಿಗಿ ,ಕುಮಾರಿ ಭಾವನ, ಭೂಮಿಕಾ ,ರವಿತೇಜ, ಕುಮಾರ್ ಕೋಟಿಗಿ ಸೇರಿದಂತೆ ಇತರರು ಪಾಲ್ಗೊಂಡು ಮತಿಯೊಳಗೆ ಮಂಗಳದ ಮಂತ್ರವನ್ನು ನೋಡಿಸಿ ಸಿದ್ಧಿ ಅಡೆಗೆ ಕರೆದೊಯ್ಯುವ ವರ ಪುಣ್ಯದ ನೆರವನಿತ್ತ ಸರಸ್ವತಿಯ ಸ್ಮರಣೆಯನ್ನು ನಿರಂತರ ಮಾಡುವ ಬಗೆಯನ್ನು 
ಶ್ರೀ ಎಂ.ಎಸ್.ಕೋಟಿಯವರು ಈ ಸಂದರ್ಭದಲ್ಲಿ ಮೇಲಕು ಹಾಕಿದರು. ಕಾರ್ಯಕ್ರಮವು ಅರಿವಿನಾಲಯದಲ್ಲಿ ನೆರವೇರಿತು.
