ಗದಗ( ಸತ್ಯದರ್ಶನ )ನ.1: ಪಥ ಸಂಚಲನ:ಮುಂಜಾನೆ 9 ಗಂಟೆಗೆ ಸರಿಯಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ ಅವರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.
ನಂತರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ಅವರ ನೇತೃತ್ವದ ಆಕರ್ಷಕ ಪಥಸಂಚಲನದ ಗೌರವ ಸ್ವಿಕರಿಸಿದರು.
ಜಿಲ್ಲಾ ಪೋಲಿಸ ಬ್ಯಾಂಡಿನ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೋಲಿಸ, ಗೃಹ ರಕ್ಷಕ ಪಡೆ, ಅರಣ್ಯ ರಕ್ಷಕ ಪಡೆ, ಅಗ್ನಿಶಾಮಕ ದಳ, ಅಬಕಾರಿ ದಳ, ಎನ್.ಸಿ.ಸಿ. ಸಿನಿಯರ್ ಬಾಯ್ಸ, ಗಲ್ರ್ಸ ತಂಡಗಳು, ಎಸ್.ಎಂ.ಕೃಷ್ಣಾ ನಗರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಜನರಲ್ ಹಾಗೂ ಸೇವಾದಳದ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.
ಸನ್ಮಾನಿತರು:- ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ನಾಗಮ್ಮ ಜೋಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಮಹಾದೇವಪ್ಪ ಹಳ್ಳಿ, ಕರ್ನಾಟಕ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾದ ಅಶೋಕ ಸುತಾರ, ದಾನಪ್ಪ ಹಡಪದ, ಕರ್ನಾಟಕ ಲಲಿತ ಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ರಮೇಶ ಗಾವರವಾಡ, ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಚನ್ನವೀರ ಶಾಸ್ತ್ರಿ ಹಿರೇಮಠ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಡಾ.ರಾಜೇಂದ್ರ ಎಸ್.ಗಡಾದ, ಆಕಾಶವಾಣಿ ಜಿಲ್ಲಾ ವರದಿಗಾರರಾದ ಶಶಿಕಾಂತ ಕುಲಕರ್ಣಿ, ಕನ್ನಡಪ್ರಭ ದಿನಪತ್ರಿಕೆ ಜಿಲ್ಲಾ ವರದಿಗಾರರಾದ ಶಿವಕುಮಾರ ಕುಷ್ಟಗಿ, ಪ್ರಜಾವಾಣಿ ದಿನಪತ್ರಿಕೆ ಛಾಯಾಗ್ರಾಹಕರಾದ ಬನ್ನೇಶ ಕುಲಕರ್ಣಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಬೆಟಗೇರಿ ಪಿ.ಎಸ್.ಐ ಪ್ರಕಾಶ ಬಣಗಾರ, ಬಡಾವಣೆ ಪೋಲಿಸ್ ಠಾಣೆ ಪೇದೆ ಪರಶುರಾಮ ದೊಡ್ಡಮನಿ ಕ್ರೀಡಾ ಕ್ಷೇತ್ರದಲ್ಲಿ ಮತ್ತು ಗಂಗಪ್ಪ ಇಳಕಲ್ಲ, ಆದಿಲ್ ನೈಬುಸಾಬ, ಸ್ವಚ್ಛ ವಿದ್ಯಾಲಯ ರಾಜ್ಯಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾದ ಆದರ್ಶ ಮಹಾವಿದ್ಯಾಲಯ ಇಟಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಗಳೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಜನೂರು ಶಿಕ್ಷಣ ಕ್ಷೇತ್ರದಲ್ಲಿ ಈಶ್ವರಪ್ಪ ರೇವಡಿ, ವಿನಾಯಕ ಬಂಡಾ, ಕು.ಜ್ಯೋತಿ ಕ್ಯಾಮನಗೌಡ್ರ, ಕು.ನಿಖಿಲ್ ಕಡಕಭಾವಿ, ಕು.ಪ್ರತಿಭಾ ಸೊರಬದ,ಕು.ಸಂಗೀತಾ ಹುಬ್ಬಳ್ಳಿ, ಕು.ಅಕ್ಕಮಹಾದೇವಿ ಹಿರೇಮಠ, ಕು.ಮಾಂತೇಶ ಮಂಡಸೊಪ್ಪಿ, ಕು.ಮುಸ್ಕಾನ್ ತಹಶೀಲದಾರ ಇವರುಗಳನ್ನು ಸಚಿವ ಬಿ.ಸಿ.ಪಾಟೀಲ ಹಾಗೂ ಗಣ್ಯರು ಸನ್ಮಾನಿಸಿದರು.
ಸಾಂಸ್ಕøತಿಕ ಕಾರ್ಯಕ್ರಮಗಳು: ಬೆಟಗೇರಿಯ ಮಂಜು ಪ್ರೌಢ ಶಾಲಾ, ಶಾಸ್ತ್ರಿಜಿ ಪ್ರೌಢ ಶಾಲೆ ಹಾಗೂ ವಿ.ಡಿ.ಎಸ್.ಟಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿಧ್ಯಾರ್ಥಿಗಳು ಈ ಕನ್ನಡ ಮಣ್ಣನ್ನು ಮರೆಯಬೇಡ, ಭಾರಿಸು ಕನ್ನಡ ಡಿಂಡಿಮವ ಹಾಗೂ ಸ್ವಾಗತ ಸ್ವಾಗತ ಕನ್ನಡ ನಾಡಿಗೆ ಎಂಬ ಗೀತೆಗಳಿಗೆ ನಾಡುನುಡಿ ಶ್ರೀಮಂತಿಕೆಯನ್ನು ನೃತ್ಯಗೀತೆಗಳಲ್ಲಿ ಪ್ರದರ್ಶಿಸಿದರು
ತ್ರಿಚಕ್ರ ವಾಹನ ವಿತರಣೆ: ವಿಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗದಗ, ರೋಣ ಹಾಗೂ ಲಕ್ಷ್ಮೇಶ್ವರ ವಿಧಾನಸಭಾ ಕ್ಷೇತ್ರಗಳಿಗೆ ತಲಾ 6 ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ಸಚಿವ ಬಿ.ಸಿ.ಪಾಟೀಲ ಹಾಗೂ ಗಣ್ಯರು ವಿತರಿಸಿದರು.
