ಗದಗ( ಸತ್ಯದರ್ಶನ ) ಸೆ. 10: ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಎಂ.ಪಿ.ಮಾರುತಿ ಅವರು ಸರ್ಕಾರದ ಆದೇಶದನ್ವಯ ಶನಿವಾರ ಅಧಿಕಾರಿ ಸ್ವೀಕರಿಸಿದರು.
ಅಪಾರ ಸೇವಾ ಅನುಭವ ಹೊಂದಿರುವ ಇವರು ಈ ಹಿಂದೆ ಕೊಪ್ಪಳ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.ಮೂಲತ: ಚಿತ್ರದುರ್ಗ ಜಿಲ್ಲೆಯವರಾದ ಎಂ.ಪಿ.ಮಾರುತಿ ಅವರು ಬೆಳಗಾವಿ, ಗುಲ್ಬರ್ಗ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿಗಳಾಗಿದ್ದಾರೆ.
