Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿ

ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ…

ನವದೆಹಲಿ:( ಸತ್ಯದರ್ಶನ ) 9 ಸಪ್ಟಂಬರ್  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ಧಾರೆ.

ನೇತಾಜಿ ಅವರ 125 ಜನ್ಮದಿನಾಚರಣೆ ಹಿನ್ನೆಲೆಯಲ್ಲಿ 28 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ತೆಲಂಗಾಣದ ಕಮ್ಮಂ ಜಿಲ್ಲೆಯಿಂದ 280 ಟನ್ ತೂಕದ ಕಪ್ಪು ಗ್ರಾನೈಟ್ ಕಲ್ಲನ್ನು ದೆಹಲಿಗೆ ತರಲಾಗಿತ್ತು. ದೆಹಲಿಯಲ್ಲಿ ಕನ್ನಡಿಗ ಅರುಣ್ ಯೋಗಿರಾಜ್ ಮತ್ತು ಅವರ ತಂಡ ಕಲ್ಲನ್ನು ಕೆತ್ತಿ ನೇತಾಜಿಯ ಪ್ರತಿಮೆಯನ್ನು ತಯಾರಿಸಿದೆ. ಈ ಪ್ರತಿಮೆಯನ್ನು ತಯಾರಿಸಲು 26 ಸಾವಿರ ಮಾನವ ಗಂಟೆಗಳ ಸಮಯ ತಗುಲಿದೆ. 65 ಟನ್ ತೂಕದ 28 ಅಡಿ ಎತ್ತರದ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ.

ಪ್ರಧಾನಿ ಮೋದಿ ಅವರು 2022ರ ಜನವರಿ 23 ರಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ದಿನ ಪ್ರತಿಮೆ ಸ್ಥಾಪಿಸಿರುವ ಸ್ಥಳದಲ್ಲಿ ನೇತಾಜಿಯ ಹಾಲೋಗ್ರಾಂ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಬಳಿಕ ಈಗ ಕಪ್ಪು ಕಲ್ಲಿನ ಪ್ರತಿಮೆಯನ್ನು ಹಾಲೋಗ್ರಾಂ ಪ್ರತಿಮೆ ಇದ್ದ ಸ್ಥಳದಲ್ಲಿ ಸ್ಥಾಪಿಸಲಾಗಿದೆ.

 

 

Related posts

ಯೋಗದಿಂದ ದೈಹಿಕ ಮಾನಸಿಕ ಸದೃಢತೆ ಸಾಧ್ಯ:  ಜಗದೀಶ್ ಕರಡಿಯವರು 

satyadarshana

ಅಚಲ ಆತ್ಮವಿಶ್ವಾಸಕ್ಕೆ ಅತಿಥಿ  ಆಡಿ ತಪ್ಪುವೆನೆಂದು ಎಂದು  ಆಡುವುದು ಬಿಡಲಿಲ್ಲ.

satyadarshana

ಮಾಹಿತಿ ನೀಡದ ಕಲ್ಬುರ್ಗಿ ಜಿ.ಪಂ. ಉಪ ಕಾರ್ಯದರ್ಶಿ ಸೇರಿ, 18 ಅಧಿಕಾರಿಗಳಿಗೆ ದಂಡ: ಬಿ. ವೆಂಕಟಸಿಂಗ್

satyadarshana

Leave a Comment