Satya Darshana
ಬಿಸಿ ಬಿಸಿ ಸುದ್ದಿ
Other

ಜಮೀನಿಗೆ ಹೊರಟಿದ್ದ ರೈತರು, ಚಿರತೆ ಕಂಡು ಕಕ್ಕಾಬಿಕ್ಕಿ.

ಗದಗ :ಹಾರೂಗೇರಿ  ಗ್ರಾಮದ ಜಮೀನುಗಳಿಗೆ ಹೊಂದಿಕೊಂಡಿರುವ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಬೀಡುಬಿಟ್ಟಿದೆ. ಚಿರತೆ ಇರುವ ದೃಶ್ಯವನ್ನು ರೈತರು ತಮ್ಮ ಮೊಬೈಲ್​ ನಲ್ಲಿ ಸೆರೆ ಹಿಡಿದಿದ್ದಾರೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಜಮೀನಿಗೆ ಹೊರಟಿದ್ದ ರೈತರು, ಚಿರತೆ ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.

ಸುಮಾರು 2 ವರ್ಷಗಳಿಂದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಏಕಾಂಗಿಯಾಗಿ ಕಾಲ ಕಳೆಯುತ್ತಿದೆ. ಇದುವರೆಗೂ ಯಾರಿಗೂ ತೊಂದರೆ ನೀಡಿಲ್ಲ ಅಂತ ಅರಣ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Related posts

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ

satyadarshana

ಸೇವೆಯ ಅಕ್ಷಯಪತ್ರೆ ಬಿದರೂರ..

satyadarshana

ಸೂಡಿ ಗ್ರಾಮದಲ್ಲಿ ಡೆಂಗೆ ದಾಂಗುಡಿ ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯಿತಿ  

satyadarshana

Leave a Comment