ಗದಗ : ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭರಮಪ್ಪ ದೊಡ್ಡಮನಿ (55) ಕೊಲೆಯಾದ ವ್ಯಕ್ತಿ ಹಾಗೂ ಸುರೇಶ್ ದೊಡ್ಡಮನಿ(28) ಆರೋಪಿ. ಕ್ಷುಲ್ಲಕ ಕಾರಣಗಳಿಗಾಗಿ ಸುರೇಶ್ ಕುಟುಂಬಸ್ಥರೊಂದಿಗೆ ಆಗಾಗ ಜಗಳವಾಡುತ್ತಿದ್ದ.
ಶನಿವಾರ ರಾತ್ರಿ ಸಹ ತಂದೆ ಮಗನ ಮಧ್ಯೆ ಕಲಹವಾಗಿದೆ. ಕೆಲಸದ ವಿಚಾರದಲ್ಲಿ ಬೈದು ಬುದ್ಧಿ ಮಾತು ಹೇಳಿದಕ್ಕೆ ಮಗ ಸುರೇಶ್ಗೆ ಕೋಪ ಬಂದಿದೆ. ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದರಿಂದಾಗಿ ಕೋಪಗೊಂಡ ಮಗ ಮನೆಯಲ್ಲಿದ್ದ ಚೂರಿಯಿಂದ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ.
