ಸುದ್ದಿಮೂಲ -ಸತ್ಯದರ್ಶನ.
ಗದಗ : ತಾಲೂಕು ಕೇಂದ್ರದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ಸೂಡಿ ಗ್ರಾಮದ (ಪರಿಶಿಷ್ಟ ಜಾತಿ) ಎಸ್ ಸಿ ಕಾಲೋನಿಯಲ್ಲಿ ಪಿಡಬ್ಲ್ಯೂಡಿ ವತಿಯಿಂದ ಆರಂಭಗೊಂಡಿದ್ದ ರಸ್ತೆ ಕಾಮಗಾರಿಯ ಎರಡು ಬದಿಯಲ್ಲಿ ಚರಂಡಿ ವ್ಯವಸ್ಥೆ ಇತ್ತು ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತನ್ನು ಕೇಳಿ ಒಂದು ಬದಿಯ ಚರಂಡಿ ಮುಚ್ಚಿಸಿ ಇನ್ನೊಂದುಬದಿಯಲ್ಲಿ ವಿಪರೀತ ಚರಂಡಿ ನೀರು ಹರಿಯುವಂತೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿರುವುದು ರಸ್ತೆ ಕಾಮಗಾರಿ ಅವೈಜ್ಞಾನಿಕ ಸ್ಥಿತಿಯಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ನಿರ್ವಹಿಸಲು ಸದರಿ ಕಾಲೋನಿಯ ಸಾರ್ವಜನಿಕರು ಪತ್ರಿಕೆಯೊಂದಿಗೆ ಕೇಳಿಕೊಂಡಿದ್ದಾರೆ.
” ರಸ್ತೆಯ ನಿರ್ಮಾಣದ ವೈಜ್ಞಾನಿಕ ಕಾರ್ಯ,ಒಂದೆಡೆ ಮುಚ್ಚಿಸಿದ ಗಟಾರದಿಂದಾಗಿ ನನ್ನ ಮನೆ ಮುಂದೆ ಕಾಲೋನಿಯ ಸಂಪೂರ್ಣ ಕೊಳಚೆ ನೀರು ನಿಲ್ಲುವಂತೆ ಮಾಡಿದ್ದಾರೆ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆ ನನಗೆ ತೊಂದರೆ ನೀಡಿದ ಗುತ್ತಿಗೆದಾರನ ಪರವಾನಿಗೆ ರದ್ದು ಪಡಿಸಲು ಅರ್ಜಿ ಸಲ್ಲಿಸುತ್ತೇನೆ.
– ಯಲ್ಲಪ್ಪ ಕಡಬಿನ ( ನೊಂದ ಫಲಾನುಭವಿ )
