Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಸರ್ಕಾರಿ ಶಾಲಾ ಮಕ್ಕಳ ಬೇಳೆಯಲ್ಲೂ ಭಾರೀ ಭ್ರಷ್ಟಾಚಾರವಾಗಿದೆ. ಕಳಪೆ ಬೇಳೆ ಕೊಟ್ಟು ಮಕ್ಕಳಿಗೆ ಭಾರೀ ವಂಚನೆ

ಸುದ್ದಿಮೂಲ ಸತ್ಯದರ್ಶನ

ಕೊಪ್ಪಳ : ಸರ್ಕಾರಿ ಶಾಲಾ ಮಕ್ಕಳ ಬೇಳೆಯಲ್ಲೂ ಭಾರೀ ಭ್ರಷ್ಟಾಚಾರವಾಗಿದೆ. ಕಳಪೆ ಬೇಳೆ ಕೊಟ್ಟು ಮಕ್ಕಳಿಗೆ ಭಾರೀ ವಂಚನೆ ಮಾಡಿದ್ದಾರೆ. ಬಿಸಿಯೂಟಕ್ಕೆ ಕಳಪೆ ಬೇಳೆ ಕೊಟ್ಟು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಅಧಿಕಾರಿಗಳು ಬಡ ಮಕ್ಕಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದು , ರಾಜ್ಯದಲ್ಲಿ ಸೇವನೆಗೆ ಯೋಗ್ಯವಲ್ಲದ ಬೇಳೆ ಸಪ್ಲೈ ಮಾಡುತ್ತಿದ್ದಾರೆ.

ಕರ್ನಾಟಕ ಆಹಾರ ಸರಬರಾಜು ನಿಗಮದ ನಿರ್ದೇಶಕರಿಂದ ಕೊಪ್ಪಳದಲ್ಲಿ ಲೈವ್​ ರೇಡ್​ನಲ್ಲಿ 125 ಕೋಟಿ ಭಾರೀ ಭ್ರಷ್ಟಾಚಾರ ಬಯಲಾಗಿದೆ. ಸರ್ಕಾರದಿಂದ ಬೇಳೆ ಖರೀದಿಗೆ ಪ್ರತಿ ಕೆ.ಜಿಗೆ ತಲಾ 85 ರೂ.ನಿಗದಿ ಮಾಡಿದ್ದು , ಸಪ್ಲೈಯರ್ಸ್ 40 % ಕಳಪೆ ಬೇಳೆ ಖರೀದಿಸಿ ವಂಚಿಸುತ್ತಿದ್ದಾರೆ.

ಭ್ರಷ್ಟಚಾರದಲ್ಲಿ ಆಹಾರ, ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರ ಒಂದು ಮೂಟೆ ಬೇಳೆ ಖರೀದಿಗೆ 8,500 ರೂ ಕೊಡುತ್ತೆ , ಅಧಿಕಾರಿಗಳು ಪ್ರತಿ ಮೂಟೆ ಮೇಲೆ 2000 ಲಂಚ ಪಡೆಯುತ್ತಿದ್ದಾರೆ.ಏಜೆನ್ಸಿಗಳ ಜೊತೆ ಸೇರಿಕೊಂಡ 2 ಇಲಾಖೆ ಅಧಿಕಾರಿಗಳಿಂದ ಭ್ರಷ್ಟಾಚಾರ ಮಾಡುತ್ತಿದ್ದಾರೆ.

ಕರ್ನಾಟಕ ಆಹಾರ ಸರಬರಾಜು ನಿಗಮದ ನಿರ್ದೇಶಕರಿಂದ ಶ್ರೀರಂಗಪಟ್ಟಣ, ಮದ್ದೂರು, ಕನಕಪುರದಲ್ಲೂ ದಾಳಿ ನಡೆದಿದ್ದು , ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಕೇಸ್ ದಾಖಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಿರ್ದೇಶಕರಿಂದ ರೇಡ್ ಆಗಲಿದೆ. ಕಲಬುರಗಿ ಜಿಲ್ಲೆಯಿಂದ ಕಳಪೆ ಬೇಳೆ ಪೂರೈಕೆಯಾಗಿದೆ.

ಕಲಬುರಗಿಯ ಮಯೂರ್ ಪಲ್ಸ್, ಬೀದರ್​​ನ ಮಹಾಲಕ್ಷ್ಮೀ ದಾಲ್​ಮಿಲ್ , ಹುಬ್ಬಳ್ಳಿಯ ಮುರಳಿ ಇಂಡಸ್ಟ್ರೀಸ್ , ಕಲಬುರಗಿಯ ಆಮಿತ್ ಆಗ್ರೋ , ಯಶ್ ಪ್ರೊಟೀನ್ಸ್​ ಪೈ.ಲಿ. ಈ ಎಲ್ಲಾ ಕಂಪನಿಗಳನ್ನು ಬ್ಲಾಕ್​ ಲಿಸ್ಟ್​ಗೆ ಸೇರಿಸಲು ಆಗ್ರಹಿಸಲಾಗಿದೆ.

 

Related posts

ಮುಂಬೈ ಗೆಲುವಿನಿಂದ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಔಟ್

satyadarshana

ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಕಿರುಕುಳ ಕ್ಕೆ ಬೇಸತ್ತು ವಾಟರ್ ಮ್ಯಾನ್ ಮಲ್ಲಪ್ಪ ನೇಣಿಗೆ ಶರಣು.

satyadarshana

ಆಸ್ಪತ್ರೆ ಗೇಟ್ ಒಳಗೆ ಹೋದರೆ ಸಾಕು ಇಲ್ಲಿ ಕಾಣಿಸೋದು ಸ್ವಚ್ಛತೆ ಅಲ್ಲ, ಬದಲಿಗೆ ರಾಶಿ ರಾಶಿ ಬಿಯರ್ ಬಾಟಲಿಗಳು..ಬಿದ್ದಿವೆ ಮದ್ಯದ ಬಾಟಲಿಗಳು! ಎಲ್ಲಿದ್ದೀರಿ ಅಧಿಕಾರಿಗಳೇ?

satyadarshana

Leave a Comment