ಗಜೇಂದ್ರಗಡ. ನಾಡಿನ ಸಮಸ್ತ ಜನತೆಗೆ ಗದಗ ಜಿಲ್ಲಾ ಗಜೇಂದ್ರಗಡ ತಾಲ್ಲೂಕ ಜೆಡಿಎಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮತ್ತು ಸಾಬ್ ವಾಯ್ ಮುಧೋಳ (ಸಾಗರ್) ಅವರು ಮತ್ತು ಎಸ್. ಸಿ ಘಟಕದ ಜಿಲ್ಲಾಧ್ಯಕ್ಷರು ಹಾಗೂ ರೋಣ ಮತ್ತು ನರಗುಂದ ತಾಲ್ಲೂಕಿನ ವೀಕ್ಷಕರಾದ ಶ್ರೀ ಪಿ. ಸಿ ಹಿರೇಮನಿ ಹಾಗೂ ಎಸ್. ಟಿ. ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಎಲ್. ಡಿ. ತಳವಾರ ಅವರು ಮತ್ತು ಪಕ್ಷದ ಮುಖಂಡರು ಹಾಗೂ ಯುವಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಪ್ರವಾದಿ ಮೊಹಮ್ಮದ್ ಪೈಗಂಬರ ಅವರ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು ಕೋರಿದರು
ಪ್ರವಾದಿ ಮುಹಮ್ಮದ್ ಪೈಗಂಬರರು ಮೆಕ್ಕಾದಲ್ಲಿ ಹುಟ್ಟಿದ ಸಂದರ್ಭದಲ್ಲಿ, ಅಲ್ಲಿ ಅನಾಗರಿಕತೆ ವ್ಯಾಪಿಸಿತ್ತು. ಜೂಜು, ಅನಾಚಾರ, ಅಕ್ರಮ ತಾಂಡವವಾಡುತ್ತಿದ್ದವು. ಕರಿಯ ಗುಲಾಮರನ್ನು ಕೀಳಾಗಿ ಕಾಣುತ್ತಿರುವ ಜೊತೆಗೆ ಹಿಂಸೆಗೂ ಸೂಚಿಸಲಾಗುತ್ತಿಲ್ಲ. ಹೇಳುವುದಾದರೆ ಒಟ್ಟಾರೆ ಆ ಮಾನವೀಯತೆಗೇ ಅಲ್ಲಿ ಸಂಚಕಾರ ಒಡಗಿತ್ತು. ಇಂಥ ಕಾಲಘಟ್ಟದಲ್ಲಿ ಜನಿಸಿದ ಪ್ರವಾದಿ ಮುಹಮ್ಮದರು, ತಮ್ಮ ಪ್ರಾಮಾಣಿಕ ವರ್ತನೆಯಿಂದ ಜನಮನ ಗೆದ್ದು, ‘ಅಮೀನ್’ ಮಾಣಿಕ), ‘ಸಾದಿಕ್’ (ಸತ್ಯಸಂಧ) ಎಂಬ ಬಿರುದುಗಳನ್ನು ಪಡೆದರು.
ಯಾವುದೇ ಸಮುದಾಯಕ್ಕೆ ಜಾತಿಯ ಅಭಿಮಾನವಿರಲಿ ಅದು ಇನ್ನೊಂದು ಜಾತಿಯನ್ನು ದ್ವೇಷಿಸುವ ಹಂತ ತಲುಪದಂತಿರಬೇಕು. ಹಾಗಾಗಿ ಇತರೆ ಜಾತಿ ಸಮುದಾಯಗಳ ಬಗ್ಗೆ ಪ್ರೀತಿ ಸ್ನೇಹದ ಬೆಸುಗೆ ಸಾಧ್ಯವಾಗಬೇಕು. ವಾಲ್ಮೀಕಿ ಜಯಂತಿಯಲ್ಲಿ ಆಯಾ ಊರುಗಳ ಬೇಡ ಸಮುದಾಯದವರನ್ನು ಮಾತ್ರ ಒಳಗೊಳ್ಳದೆ ಎಲ್ಲಾ ಜಾತಿ ಸಮುದಾಯಗಳ ವಿಶ್ವಾಸ ಪಡೆದು ಕೂಡಿಕೊಂಡು ಆಚರಣೆ ಮಾಡಬೇಕಿದೆ. ಅಂತೆಯೇ ಮೇಲುಜಾತಿಗಳ ದಬ್ಬಾಳಿಕೆಗೆ ಒಳಗಾದ ಕಡೆಗಳಲ್ಲಿ ಪ್ರಜಾಸತ್ತಾತ್ಮಕ ಪ್ರತಿರೋಧವನ್ನು ದಾಖಲಿಸಬೇಕಿದೆ. ಎಷ್ಟೋ ಕಡೆಗಳಲ್ಲಿ ದಲಿತರ ಶೋಷಣೆಯಲ್ಲಿ ಹಿಂದುಳಿದ ವರ್ಗ ಮತ್ತು ಜಾತಿಗಳು ಸೇರ್ಪಡೆಗೊಂಡಿವೆ. ಅದರಲ್ಲಿ ವಾಲ್ಮೀಕಿ ಸಮುದಾಯವೂ ಒಂದು. ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತಿದ್ವೇಷಗಳು ಬೆಳೆಯದ ಹಾಗೆ ಜಾತ್ಯತೀತ ತಿಳಿವನ್ನು ಹಂಚುವ ವೇದಿಕೆಗಳಾಗಿ ಈ ಆಚರಣೆ ರೂಪುಗೊಳ್ಳಬೇಕಿದೆ. ಯಾವುದೇ ಸಮುದಾಯಕ್ಕೆ ಜಾತಿಯ ಅಭಿಮಾನವಿರಲಿ ಅದು ಇನ್ನೊಂದು ಜಾತಿಯನ್ನು ದ್ವೇಷಿಸುವ ಹಂತ ತಲುಪದಂತಿರಬೇಕು. ಹಾಗಾಗಿ ಇತರೆ ಜಾತಿ ಸಮುದಾಯಗಳ ಬಗ್ಗೆ ಪ್ರೀತಿ ಸ್ನೇಹದ ಬೆಸುಗೆ ಸಾಧ್ಯವಾಗಬೇಕು. ವಾಲ್ಮೀಕಿ ಜಯಂತಿಯಲ್ಲಿ ಆಯಾ ಊರುಗಳ ಬೇಡ ಸಮುದಾಯದವರನ್ನು ಮಾತ್ರ ಒಳಗೊಳ್ಳದೆ ಎಲ್ಲಾ ಜಾತಿ ಸಮುದಾಯಗಳ ವಿಶ್ವಾಸ ಪಡೆದು ಕೂಡಿಕೊಂಡು ಆಚರಣೆ ಮಾಡಬೇಕಿದೆ. ಅಂತೆಯೇ ಮೇಲುಜಾತಿಗಳ ದಬ್ಬಾಳಿಕೆಗೆ ಒಳಗಾದ ಕಡೆಗಳಲ್ಲಿ ಪ್ರಜಾಸತ್ತಾತ್ಮಕ ಪ್ರತಿರೋಧವನ್ನು ದಾಖಲಿಸಬೇಕಿದೆ. ಎಷ್ಟೋ ಕಡೆಗಳಲ್ಲಿ ದಲಿತರ ಶೋಷಣೆಯಲ್ಲಿ ಹಿಂದುಳಿದ ವರ್ಗ ಮತ್ತು ಜಾತಿಗಳು ಸೇರ್ಪಡೆಗೊಂಡಿವೆ. ಅದರಲ್ಲಿ ವಾಲ್ಮೀಕಿ ಸಮುದಾಯವೂ ಒಂದು. ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು.