Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

*ಪೊಲೀಸ ಇಲಾಖೆಯಿಂದ ರಾಯಬಾಗ ತಾಲೂಕಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಂದು ಕೊರತೆ ಸಭೆ

ವರದಿ: ಮಲ್ಲು ದೊಡ್ಡಮನಿ

ರಾಯಬಾಗ:22.08.2021

ತಮ್ಮ ಸಮಸ್ಯೆಗಳ ಕುರಿತು ಎಸ್ಸಿ. ಎಸ್ಟಿ ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದು

ಇಲಾಖೆಯ ಅಧಿಕಾರಿಗಳಿಗೆ ತಮ್ಮ ಅಳಲನ್ನು ದಲಿತ ನಾಯಕರು ತೋಡಿಕೊಂಡರು.

ರವಿವಾರ.22ರಂದು ತಾ.ಪಂ ಸಭಾಂಗಣದಲ್ಲಿ ಡಿ.ವಾಯ್.ಎಸ್.ಪಿ ಎಸ್.ವಿ.ಗಿರೀಶರವರ ಅಧ್ಯಕ್ಷತೆಯಲ್ಲಿ ಎಸ್ಸಿ.ಎಸ್ಟಿ ಕುಂದು ಕೊರತೆ ಸಭೆ ನಡೆಯಿತು.

*ಚಾಲನಾ ಪರವಾನಗಿ ನೀಡುವ ಸಲುವಾಗಿ ಆರ್.ಟಿ.ಓ.ಕ್ಯಾಂಪಗೇ ಮನವಿ*

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಚಾಲನಾ ಪರವಾನಿಗೆ ನೀಡುವ ಸಲುವಾಗಿ ಒಂದು ಕ್ಯಾಂಪ ನಡೆಸುವಂತೆ ದಲಿತ ನಾಯಕ ಮಹಾವೀರ ಐಹೊಳೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

*ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತ ವಾಗಿದೆ ಇದನ್ನು ತಡೆಯಲು ಕೊರಿಕೆ*

ತಾಲೂಕಿನ ರಾಯಬಾಗ,ನಂದಿಕುರಳಿ,ಬ್ಯಾಕೂಡ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಷರ್ಗಳಲ್ಲಿ ಬಾಲಕಾರ್ಮಿಕ ರನ್ನು ಕೆಲಸಕ್ಕೆ ಹಚ್ಚುತ್ತಿರುವುದನ್ನು ನಿಲ್ಲಿಸಬೇಕು ಎಂದು ಕಂಕಣವಾಡಿ ಗ್ರಾಮದ ಸಚೀನ ಸೊನಾವಣೆ ಆಗ್ರಹಿಸಿದರು.

*ವೇಶ್ಯಾವಾಟಿಕೆ ತಡೆಯಲು ಆಗ್ರಹ*

ತಾಲೂಕಿನ ಬೆಕ್ಕೇರಿ ಗ್ರಾಮದ ಲ್ಲಿ 16.17.18 ವಯಸ್ಸಿನ ಹೆಣ್ಣು ಮಕ್ಕಳನ್ನು ವೆಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿ.ಎಸ್.ಎಸ್.ಮುಖಂಡ ಪರಶುರಾಮ ಟೊನಪೆ ಆಗ್ರಹಿಸಿದರು.

*ಕಳ್ಳಭಟ್ಟಿ ಸಾರಾಯಿ ಮಾರಾಟ ನಿಷೇಧಿಸಲು ಆಗ್ರಹ*

ಮೊರಬ ಗ್ರಾಮದ ಬಸವೇಶ್ವರ ನಗರದಲ್ಲಿ ಅವ್ಯಾಹತವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಇದನ್ನು ತಕ್ಷಣವೇ ನಿಲ್ಲಿಸಿ, ಸಾರಾಯಿ ಮಾರಾಟ ಮಾಡುವವರ ಮೇಲೆ ಕ್ರಮ ಜರುಗಿಸುವಂತೆ

ಮೊರಬ ಗ್ರಾಮದ ಪ್ರಶಾಂತ ಕಾಂಬಳೆ ಆಗ್ರಹಿಸಿದರು.

*ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಸಲಹೆ*

ಪ್ರತಿ ತಿಂಗಳ ಕೊನೆಯ ಶನಿವಾರ ಮೊದಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ನಡೆಯುತ್ತಿತ್ತು,ಈಗ ಕೊವಿಡ್-19ಸೊಂಕು ನೆಪದಲ್ಲಿ ಸಭೆ ಕರೆದಿಲ್ಲ ಕೂಡಲೇ ಸಭೆ ಕರೆಯುವಂತೆ ಹಾರೂಗೇರಿ ಗ್ರಾಮದ ದಲಿತ ನಾಯಕ ಸುರೇಶ ಐಹೋಳೆ ಕೇಳಿಕೊಂಡರು.

ಸರ್ವ ಜನಾಂಗದ ಸಮಸ್ಯೆಗಳಿಗೆ ಶಿಘ್ರದಲ್ಲಿ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ

ಡಿ.ವೈ.ಎಸ್.ಪಿ.ಎಸ್.ವಿ.ಗಿರೀಶ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ

ಸಿ.ಪಿ.ಐ.ಎಚ್.ಡಿ.ಮುಲ್ಲಾ,

ದಲಿತ ನಾಯಕರಾದ ನಾಮದೇವ ಕಾಂಬಳೆ,ಜಯಪಾಲ ವಕೀಲಕರ, ಮಹಾವೀರ ಐಹೊಳೆ,ಅನೀಲ ಸಾನೆ, ಸುರೇಶ ಐಹೋಳೆ, ತ್ಯಾಗರಾಜ ಕದಂ,ಗಣೇಶ ಕಾಂಬಳೆ, ಕಿರಣ ಕಾಂಬಳೆ,ಕಾಡೇಶ ಐಹೊಳೆ

ಪರಶುರಾಮ ಟೊನಪೆ,ಸಚೀನ ಸೊನಾವಣೆ ಮುಂತಾದವರು ಉಪಸ್ಥಿತರಿದ್ದರು.

Related posts

ಕಾಲಮಿತಿಯೊಳಗಾಗಿ ಜನನ-ಮರಣ ನೋಂದಣಿ ಕಾರ್ಯ ಜರುಗಲಿ.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ

satyadarshana

ಭಾರತವು ಐಕ್ಯಗೊಳ್ಳಲು ಸರ್ದಾರ್ ಪಟೇಲರೇ ಕಾರಣ ಮಾದಿ 

satyadarshana

ತೆಲುಗು ಟೈಟಾನ್ಸ್ ವಿರುದ್ಧ ಗೆಲುವು ಕಂಡ ಬುಲ್ಸ್ ಕಳೆದ ಮೂರು ಪಂದ್ಯಗಳಲ್ಲಿ ಸೋಲಿನ ಫಲಿತಾಂಶ ಕಂಡಿತ್ತು ಬೆಂಗಳೂರು

satyadarshana

Leave a Comment